ಭೀಕರ ಅಪಘಾತ: ೧೩ ಮಂದಿ ಸ್ಥಳದಲ್ಲೇ ಮೃತ್ಯು

ಚಿಕ್ಕಬಳ್ಳಾಪುರ: ಸಿಮೆಂಟ್ ಬಲ್ಕರ್‌ಗೆ ಟಾಟಾ ಸುಮೋ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ  ದುರಂತದಲ್ಲಿ ಮಗು ಸಹಿತ ೧೩ ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ೭ ಗಂಟೆಗೆ ಊರನ್ನೇ ನಡುಗಿಸಿದ ದುರಂತ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ೪೪ರಲ್ಲಿ ಚಿತ್ರಾವತಿ ಬಳಿ ಅಪಘಾತ ಸಂಭವಿಸಿದೆ. ಟಾಟಾ ಸುಮೋ ಆಂಧ್ರ ಪ್ರದೇಶದಿಂದ ಬೆಂಗಳೂರಿನತ್ತ ತೆರಳುತ್ತಿತ್ತು. ಈ ವಾಹನದಲ್ಲಿದ್ದ ೧೩ ಮಂದಿ ಕೂಡಾ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಒಂದು ಮಗು, ಮೂವರು ಮಹಿಳೆಯರು, ಎಂಟು ಮಂದಿ ಪುರುಷರು ಒಳಗೊಂಡಿದ್ದಾರೆ. ಇವರ ಪೈಕಿ ೬ ಮಂದಿಯ ಗುರುತು ಈ ವೇಳೆಗೆ ಪತ್ತೆಹಚ್ಚಲಾಗಿದೆ.

ದೊಡ್ಡಬಳ್ಳಾಪುರದ ಅರುಣಾ, ಇವರ ಪುತ್ರ ಋತ್ವಿಕ್, ಆಂಧ್ರಪ್ರದೇಶದ ಕೊತ್ತಚೆರು ನಿವಾಸಿ ಪೆರುಮಾಳ್ ಪವನ್ ಕುಮಾರ್, ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಸುಬ್ಬಮ್ಮ, ಬಾಗೇತಲ್ಲಿಯ ಮಾರ್ಗಾನುಕುಂಟಿಯ ನರಸಿಂಹಮೂರ್ತಿ, ಟಾಟಾಸುಮೋ ಚಾಲಕ ನರಸಿಂಹಪ್ಪ ಮೃತಪಟ್ಟವರು.

RELATED NEWS

You cannot copy contents of this page