ಮದ್ಯ ಸಾಗಾಟ: ಮೂರು ಪ್ರಕರಣ ದಾಖಲು

ಕಾಸರಗೋಡು: ಅಬಕಾರಿ ತಂಡ ಕಾಸರಗೋಡಿನ ವಿವಿಧೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು  ಕೇರಳ ನಿರ್ಮಿತ ಮದ್ಯ ಕೈವಶವಿರಿಸಿಕೊಂಡ ಮೂವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದೆ.

ಇದರಂತೆ ಕಾಸರಗೋಡು ಇ.ಇ. ಆಂಡ್ ಎಎನ್‌ಎಸ್‌ಎಸ್ ಕಚೇರಿಯ ಸ್ಪೆಷಲ್ ಸ್ಕ್ವಾಡ್ ಪ್ರಿವೆಂಟೀವ್ ಆಫೀಸರ್ ಕೆ.ವಿ. ಸುರೇಶ್‌ರ ನೇತೃತ್ವದ ಅಬಕಾರಿ ತಂಡ ಕಳನಾಡಿನ ದೇಳಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 7.5 ಲೀಟರ್ ಕೇರಳ ಮದ್ಯ ವಶಪಡಿಸಿಕೊಂಡು, ಅದಕ್ಕೆ ಸಂಬಂಧಿಸಿ  ಅನಿಲ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದೇ ರೀತಿ ಸ್ಪೆಷಲ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಮುರಳಿ ಕೆ.ವಿ.ಯವರ ನೇತೃತ್ವದ ಅಬಕಾರಿ ತಂಡ ವಿವೇಕಾನಂದ ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 10 ಲೀಟರ್ ಕೇರಳ ಮದ್ಯ ವಶಪಡಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿ  ದಾಮೋದರನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇನ್ನು ಇದೇ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟಿವ್ ಆಫೀಸರ್ ಸಿ.ಕೆ. ಸುರೇಶ್‌ರ ನೇತೃತ್ವದ ತಂಡ ಅಬಕಾರಿ ತಂಡ ಆರ್.ಡಿ. ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 11 ಲೀಟರ್ ಕೇರಳ ಮದ್ಯ ವಶ ಪಡಿಸಿಕೊಂಡು ಇದಕ್ಕೆ ಸಂಬಂಧಿಸಿ ಸತೀಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

Leave a Reply

Your email address will not be published. Required fields are marked *

You cannot copy content of this page