ಮಸೀದಿಯಿಂದ 3.10 ಲಕ್ಷ ರೂ, ಚಿನ್ನ ಕಳವು

ಕಾಸರಗೋಡು: ಮಸೀದಿಗೆ ಕಳ್ಳರು ನುಗ್ಗಿ 3,10,000 ರೂ. ನಗದು ಮತ್ತು ಎರಡು ಪವನ್ ಚಿನ್ನ ಕಳವುಗೈದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕೂಡ್ಲಿನ ಚೂರಿ ಸಲಫಿ ಮಸೀದಿಯಲ್ಲಿ ಈ ಕಳವು ನಡೆದಿದೆ. ಈ ಬಗ್ಗೆ ಮಸೀದಿಯ ಅಡ್ಮಿನಿಸ್ಟ್ರೇಟರ್ ಮುಹಮ್ಮದ್ ಮಶೂದ್ ದೂರು ನೀಡಿದ್ದು, ಜೂನ್ 24ರಂದು ಬೆಳಿಗ್ಗೆ 8ರಿಂದ 8.30ರ ನಡುವಿನ ಅಂತರದಲ್ಲಿ  ಮಸೀದಿಯ ಕಚೇರಿಯೊಳಗೆ ಕಳ್ಳರು ನುಗ್ಗಿ ಅಲ್ಲಿದ್ದ ಮೇಜಿನ ಒಳಗೆ ಇರಿಸಲಾಗಿದ್ದ ನಗನಗದನ್ನು ಕಳವುಗೈದಿರುವುದಾಗಿ ತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಸೀದಿಯ ಸಿಸಿ ಟಿವಿ ಕ್ಯಾಮರಾದಲ್ಲಿ ಕಳ್ಳನೆಂದು ಶಂಕಿಸಲಾಗುತ್ತಿರುವ ಓರ್ವನ ದೃಶ್ಯವೂ ಪತ್ತೆಯಾಗಿದ್ದು, ಅದರ ಜಾಡು ಹಿಡಿದು ಪೊಲೀಸರು ಕಳ್ಳನ ಪತ್ತೆಗಾಗಿರುವ ಯತ್ನ ಮುಂದುವರಿಸಿದ್ದಾರೆ.

RELATED NEWS

You cannot copy contents of this page