ರಾಜ್ಯದಲ್ಲಿ ಇನ್ನೂ ನಿಲ್ಲದ ಭಾರತಾಂಬೆಯ ವಿವಾದ

ತಿರುವನಂತಪುರ: ದಿನಗಳ ಹಿಂದೆ ರಾಜ್‌ಭವನದಲ್ಲಿ ನಡೆದ ಎರಡು ಕಾರ್ಯಕ್ರಮಗಳಲ್ಲಿ ಭಾರತಾಂಬೆಯ ಚಿತ್ರ ಇರಿಸಿದ ಹೆಸರಲ್ಲಿ ಸರಕಾರ ಮತ್ತು ರಾಜ್ಯಪಾಲರ ನಡುವೆ ತಲೆಯೆತ್ತಿದ್ದ ಭಿನ್ನಮತ ಹಾಗೂ ವಿವಾದಗಳು ಶಮನಗೊಳ್ಳದೆ  ಮುಂದುವರಿಯುತ್ತಿದೆ. ಇದರ ಬೆನ್ನಲ್ಲೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವೆ ಪತ್ರ ಸಮರವೂ ಆರಂಭಗೊಂಡಿದೆ.

ರಾಜ್ ಭವನದಲ್ಲಿ ದಿನಗಳ ಹಿಂದೆ ನಡೆದ ಸಮಾರಂಭದಲ್ಲಿ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಶಿಷ್ಟಾಚಾರದ ಉಲ್ಲಂ ಘನೆ ನಡೆಸಿದ್ದಾರೆಂದೂ, ಇದು ಮಾತ್ರ ವಲ್ಲ ರಾಜ್ಯದ ಸಂವಿಧಾನದ ಮುಖ್ಯಸ್ಥ ರನ್ನು ಅಪಮಾನಗೈದಿದ್ದಾರೆಂದೂ ತೋ ರಿಸಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಮುಖ್ಯಮಂತ್ರಿ ಪಿಣರಾಯಿಗೆ ಪತ್ರ ಬರೆದಿದ್ದಾರೆ. ಭಾರತಾಂಬೆ ಎಂಬುವುದು ಯಾವುದೇ ರಾಜಕೀಯ ಪಕ್ಷದ ಆಶಯವಲ್ಲ. ಸಂವಿಧಾನಾ ತ್ಮಕವಾದ ವಿಧಾನಸಭೆಯಲ್ಲಿ  ಭಾರತಾಂಬೆ ಎಂಬ ಆಶಯವನ್ನು ಅಂಗೀಕರಿಸಿದೆ. ಸಂವಿಧಾ ನಾತ್ಮಕ ಸಂಸ್ಥೆಯಾದ ರಾಜ್‌ಭವನವನ್ನು ಒಂದು ರಾಜಕೀಯ ಸಂಸ್ಥೆಯನ್ನಾಗಿ  ಚಿತ್ತೀಕರಿಸುವ ಯತ್ನ ಸರಿಯಲ್ಲವೆಂದೂ  ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಹೇಳಿದ್ದಾರೆ.

ರಾಜ್ ಭವನದಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮದಲ್ಲಿ ಭಾರತಾಂಬೆಯ ಚಿತ್ರ ಅಥವಾ ಸಂವಿಧಾನ ಬಾಹಿರ ವಿಗ್ರಹಗಳನ್ನು ಪ್ರದರ್ಶಿಸುವ ರೀತಿಯನ್ನು ಸುತರಾಂ ಒಪ್ಪಿಕೊಳ್ಳುವಂತಿಲ್ಲವೆಂದೂ ಆದ್ದರಿಂದ ಇಂತಹ ಕಾರ್ಯಕ್ರಮ ಗಳಲ್ಲಿ ಭಾರತಾಂಬೆ ಚಿತ್ರ ಅಥವಾ ವಿಗ್ರಹಗಳ  ಪ್ರದರ್ಶನವನ್ನು ಹೊರತುಪಡಿಸ ಬೇಕೆಂದು ತಿಳಿಸಿ ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಮುಖ್ಯಮಂತ್ರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನ ಪ್ರಕಾರ ಮುಖ್ಯಮಂತ್ರಿ ರಾಜ್ಯಪಾಲರಿಗೆ ಈ ಪತ್ರ ಬರೆದಿದ್ದಾರೆ.  ರಾಜ್ಯಪಾಲರು ಭಾಗವಹಿಸುವ ಸರಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಚಿಹ್ಹೆಗಳನ್ನು ಮಾತ್ರ ಪ್ರದರ್ಶಿಸಬೇಕು.  ರಾಜ್ಯಪಾಲರು ರಾಜ್ಯದ  ಸಂವಿಧಾನಾತ್ಮಕ ಮುಖ್ಯಸ್ಥರಾಗಿರುವು ದರಿಂದಾಗಿ  ಅವರು ಪಾಲ್ಗೊಳ್ಳುವ ಯಾವುದೇ ಕಾರ್ಯಕ್ರಮಗಳಲ್ಲಿ ರಾಜಕೀಯ ಮತ್ತು ಧಾರ್ಮಿಕ ಚಿಹ್ಹೆ, ಲಾಂಛನವನ್ನು ಬಳಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲವೆಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಭಾರತಾಂಬೆ ಚಿತ್ರದ ಹೆಸರಲ್ಲಿ ರಾಜ್ಯಪಾಲರು ಮತ್ತು ಸರಕಾರದ ಮಧ್ಯೆ ಭಿನ್ನಮತ ತಲೆದೋರಿರುವ ವೇಳೆಯಲ್ಲೇ, ದಿನಗಳ ಹಿಂದೆ  ರಾಜ್ ಭವನದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತಾಂಬೆಯ ಚಿತ್ರವನ್ನು ಪ್ರದರ್ಶಿಸಿರುವುದನ್ನು ಪ್ರತಿಭಟಿಸಿ  ಅಂದು ಆ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದ ಸಚಿವ ಪಿ. ಪ್ರಸಾದ್ ಅವರು ನಿನ್ನೆ  ತೃಶೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಿನ್ನೆ ರಾಜ್ಯಪಾಲರು ಭಾಗವಹಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ದ್ದರು.  ಈ ಕಾರ್ಯಕ್ರಮದಲ್ಲಿ ಸಚಿವರು ಮತ್ತು ರಾಜ್ಯಪಾಲರು ಪರಸ್ಪರ ಆತ್ಮೀಯತೆಯಿಂದ ವರ್ತಿಸಿದ್ದು ಅದು  ಸರಕಾರದ ಮತ್ತು ರಾಜ್ಯಪಾಲರ ನಡುವಿನ ಭಿನ್ನಮತದ ಕಾವನ್ನು ತಗ್ಗಿಸುವ ಒಂದು ಯತ್ನವಾಗಿದೆಯೆಂದು  ಅಭಿಪ್ರಾಯಪಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page