ರೆಸೋರ್ಟ್‌ನ ಮಹಡಿಯಿಂದ ಬಿದ್ದು ಬಾಲಕ ದಾರುಣ ಮೃತ್ಯು

ಇಡುಕ್ಕಿ: ಮೂನಾರ್ ಚಿತ್ತಿರಪುರದಲ್ಲಿ ರೆಸೋರ್ಟ್‌ನ ಆರನೇ ಮಹಡಿಯಿಂದ ಬಿದ್ದು ಒಂಭತ್ತು ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ. ಮದ್ಯಪ್ರದೇಶ ನಿವಾಸಿಯಾದ ಪ್ರಭದಯಾಲ (9) ಮೃತಪಟ್ಟ ಬಾಲಕ ಮೂನಾರ್ ಟೀಕಾಸ್ಟ್ ರೆಸೋರ್ಟ್‌ನಲ್ಲಿ ನಿನ್ನೆ ಮುಂಜಾನೆ ಈ ದುರಂತ ಉಂಟಾಗಿದೆ.

ಗಂಭೀರ ಗಾಯಗೊಂಡ ಬಾಲಕನನ್ನು ಅಂಗಮಾಲಿಯ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಪ್ರಾಣ ರಕ್ಷಿಸಲು ಸಾಧ್ಯವಾಗಲಿಲ್ಲ. ಕುಟುಂಬ ವಾಸಿಸುತ್ತಿದ್ದ ಕೊಠಡಿಯ ಸ್ಲೈಡಿಂಗ್ ಕಿಟಿಕಿ ಮೂಲಕ ಬಾಲಕ ಕೆಳಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಘಟನೆಯಲ್ಲಿ ಇಡುಕ್ಕಿ ವೆಳ್ಳತ್ತುವಲ್ ಪೊಲೀಸರು ಕೇಸು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page