ರೈಲು ಹಳಿಗಳಲ್ಲಿ ಕಲ್ಲಿರಿಸಿದ ವಿದ್ಯಾರ್ಥಿಗಳಿಬ್ಬರು ವಶಕ್ಕೆ

ಕಾಸರಗೋಡು: ಸಂಚರಿಸು ತ್ತಿರುವ ರೈಲು ಹಳಿಗೆ ಕಲ್ಲಿರಿಸಿದ  ವಿದ್ಯಾರ್ಥಿ ಗಳಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಳಪಟ್ಟಣಂ ರೈಲು ಹಳಿಯಲ್ಲಿ ಕಲ್ಲಿರಿಸಿದ ಘಟನೆಗೆ ಸಂಬಂಧಿಸಿ ಈ ವಿದ್ಯಾರ್ಥಿಗಳು ವಳಪಟ್ಟಣಂ ಪೊಲೀಸರ ವಶಕ್ಕೊಳಗಾಗಿದ್ದಾರೆ.

ನಿನ್ನೆ ಇವರು ಮಧ್ಯಾಹ್ನ ೧೨.೧೦ಕ್ಕೆ ರೈಲಿಗೆ ಕಲ್ಲಿರಿಸಿದ್ದರು.  ಆವೇಳೆ ರೈಲುಹಳಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಕಂಡು  ತಕ್ಷಣ ಅವರನ್ನು ಸೆರೆಹಿಡಿದಿದ್ದಾರೆ. ವಳಪಟ್ಟಣಂ ಪ್ರದೇಶದಲ್ಲಿ ಈ ಹಿಂದೆಯೂ ಹಲವು ಬಾರಿ ಹಲವು ರೈಲುಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆಗಳು ನಡೆದಿದ್ದವು.

೨೦೧೨ರಲ್ಲಿ ಉಪ್ಪಳ ರೈಲ್ವೇ ಟ್ರಾಕ್‌ನಲ್ಲಿ ಕಲ್ಲಿಡಲು ಯತ್ನಿಸಿದ ಮೂವರು ವಿದ್ಯಾರ್ಥಿಗಳನ್ನು ಅಂದು ಊರವರೇ ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಆದರೆ ಪ್ರಾಯಪೂರ್ತಿಯಾಗದ ಕಾರಣದಿಂದ  ಆ ವಿದ್ಯಾರ್ಥಿಗಳನ್ನು ಬಳಿಕ ಪೊಲೀಸರು ಬಿಡುಗಡೆಗೊಳಿಸಿದ್ದರು. ವಿದ್ಯಾರ್ಥಿಗಳು ರೈಲು ಹಳಿಗಳಲ್ಲಿ ಕಲ್ಲಿರಿಸುತ್ತಿರುವುದು ಮತ್ತು ಕಲ್ಲು ತೂರಾಟ ನಡೆಸುತ್ತಿರುವ ರೀತಿಯು   ಬೆಂಕಿಯೊಂದಿಗೆ ನಡೆಸುವ ಸರಸಾಟಕ್ಕೆ ಸಮಾನವಾಗಿದೆಯೆಂದು ಆದ್ದರಿಂದ ಅಂತಹ ಮಕ್ಕಳು ಮತ್ತು ಅವರ ಹೆತ್ತವರು ಗರಿಷ್ಠ ಜಾಗ್ರತೆ ಪಾಲಿಸಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page