ಲೋಕಸಭಾ ಕ್ಷೇತ್ರದ ಚುನಾವಣೆ: ಯುಡಿಎಫ್  ಸಮಾವೇಶ ಇಂದು

ಮಂಜೇಶ್ವರ: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಯುಡಿಎಫ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಅವರ ಪರವಾಗಿ ಚುನಾ ವಣಾ ಸಮಾವೇಶ ಇಂದು ಅಪರಾಹ್ನ ೩.೩೦ಕ್ಕೆ ಮೊರತ್ತಣೆ ಗಾಂಧಿನಗರದಲ್ಲಿ ಜರಗಲಿದೆ. ಯುಡಿಎಫ್‌ನ ಉನ್ನತ ನಾಯ ಕರು ಭಾಗವಹಿಸುವ ಸಭೆಯಲ್ಲಿ ಯುಡಿಎಫ್‌ನ ಮುಖಂಡರು, ಕಾರ್ಯಕರ್ತರು ಭಾಗವಹಿಸಬೇ ಕೆಂದು ಯುಡಿಎಫ್ ವರ್ಕಾಡಿ ಪಂಚಾಯತ್ ಸಮಿತಿ ಸಂಚಾಲಕ ಪಿ.ಬಿ. ಅಬೂಬಕ್ಕರ್ ಪಾತೂರು, ಚೆಯರ್‌ಮ್ಯಾನ್ ಮುಹಮ್ಮದ್ ಮಜಾಲ್ ವಿನಂತಿಸಿದ್ದಾರೆ.

RELATED NEWS

You cannot copy contents of this page