ಸಿ.ಕೆ. ಚಿಪ್ಪಾರ್ 13ನೇ ವಾರ್ಷಿಕ ಸಂಸ್ಮರಣೆ

ಪೈವಳಿಕೆ: ಸಿಪಿಐ ನೇತಾರ ಸಿ ಕೆ ಚಿಪ್ಪಾರ್ ರವರ 13 ನೇ ವಾರ್ಷಿಕ ಸಂಸ್ಮರಣೆ ಲಾಲ್‌ಬಾಗ್‌ನಲ್ಲಿರುವ ಸ್ಮೃತಿ ಮಂಟಪದಲ್ಲಿ ಜರಗಿತು. ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ನ್ಯಾಯವಾದಿ ವಿ. ಸುರೇಶ್‌ಬಾಬು ಸಂಸ್ಮರಣೆ ಮಾಡಿದರು. ವಿಜಯ್ ಕುಮಾರ್ ಪೆರ್ಮುದೆ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ ರಾಮಕೃಷ್ಣ ಕಡಂಬಾರ್, ನಿವೃತ್ತ ಬ್ಯಾಂಕ್ ಕಾರ್ಯದರ್ಶಿ ನಾರಾಯಣ ಪೂಜಾರಿ ಬೆಜ್ಜಂಗಳ, ಸುನಿತಾ ವಲ್ಟಿ ಡಿಸೋಜ, ರವಿ ಮೊಂತೆರೋ, ಈಶ್ವರ್ ನಾಯ್ಕ್ ಪೆರ್ಮುದೆ, ಎ.ಕೆ ಮಹಮ್ಮದ್, ಪುಷ್ಪ ಬಾಯಿಕಟ್ಟೆ, ಸಿ.ಕೆ ಚಿಪ್ಪಾರ್ ಪತ್ನಿ ಮೀನಾಕ್ಷಿ, ಮಕ್ಕಳಾದ ಅಶೋಕ್ ಎಂ.ಸಿ, ಅಜಿತ್ ಎಂ.ಸಿ (ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ), ಅಶ್ವಥ್ ಎಂ.ಸಿ. (ಸಿಪಿಐ ಪೈವಳಿಕೆ ಲೋಕಲ್ ಸಹ ಕಾರ್ಯದರ್ಶಿ) ಉಪಸ್ಥಿತರಿದ್ದರು. ಚನಿಯ ಕೊಮ್ಮಂಗಳ ಧ್ವಜಾರೋಹಣಗೈದರು ಮಂಡಲ ಸೆಕ್ರೆಟರಿಯೇಟ್ ಸದಸ್ಯ ಲಾರೆನ್ಸ್ ಡಿಸೋಜ ಸ್ವಾಗತಿಸಿದರು.

Leave a Reply

Your email address will not be published. Required fields are marked *

You cannot copy content of this page