ಸ್ಕೂಟಿಯಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯ ವಶ

ಮಂಜೇಶ್ವರ: ಸ್ಕೂಟಿಯಲ್ಲಿ ಸಾಗಿಸುತ್ತಿದ್ದ 8.64 ಲೀಟರ್ ಕರ್ನಾಟಕ ನಿರ್ಮಿತ ಮದ್ಯವನ್ನು ಹೊಸಂಗಡಿ-ಆನೆಕಲ್ಲು ರಸ್ತೆಯ ಅಂಗಡಿಪದವಿನಿಂದ ಕುಂಬಳೆ ಅಬಕಾರಿ  ರೇಂಜ್‌ನಿಂದ ಪ್ರಿವೆಂಟಿವ್ ಆಫೀಸರ್ ಮನಾಸ್ ಕೆ.ವಿ.ಯವರ ನೇತೃತ್ವದ ತಂಡ ಪತ್ತೆಹಚ್ಚಿ  ವಶಪಡಿಸಿಕೊಂಡಿದೆ. ಸ್ಕೂಟಿಯನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಆದರೆ  ಆ ವೇಳೆ ಈ ಮಾಲನ್ನು ಸಾಗಿಸುತ್ತಿದ್ದ ವ್ಯಕ್ತಿ ಪರಾರಿಯಾಗಿರುವುದಾಗಿಯೂ, ಇದಕ್ಕೆ ಸಂಬಂಧಿಸಿ ಕಡಂಬಾರ್‌ನ ರೋಹಿತ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದ ಪ್ರಿವೆಂಟಿವ್ ಆಫೀಸರ್ ಮೊದೀನ್ ಸಾಧೀರ್ ಮತ್ತು ಸಿಇಒಗಳಾದ ಹಮೀದ್, ಎಂ. ರಂಜಿತ್, ಟಿ.ಕೆ. ಜಿತಿನ್, ವಿಷ್ಣು ಎಂಬವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page