ಸೂರಂಬೈಲಿನಲ್ಲಿ ಕೆಸರುಗದ್ದೆ ಉತ್ಸವ

ಕುಂಬಳೆ: ಸೂರಂಬೈಲು ಕಲಾರ್ಪಣಂ ಬಾಲಗೋಕುಲ ವಿದ್ಯಾರ್ಥಿಗಳಿಂದ ಎಡನಾಡು ಎಯ್ಯೂರು ಸತೀಶ ಭಟ್‌ರ ಗದ್ದೆಯಲ್ಲಿ ಕೆಸರು ಗದ್ದೆ ಉತ್ಸವ ನಡೆಯಿತು.  ಪ್ರಗತಿಪರ ಕೃಷಿಕ ಸತೀಶ್ ಭಟ್‌ರನ್ನು ಪುತ್ತಿಗೆ ಪಂ. ಮಾಜಿ ಅಧ್ಯಕ್ಷೆ ಲಕ್ಷ್ಮಿ ವಿ.ಭಟ್, ಸೂರಂಬೈಲು ಜೈಹಿಂದ್ ಕ್ಲಬ್ ಪದಾಧಿಕಾರಿಗಳು, ಬಾಲಗೋ ಕುಲ ಶಿಕ್ಷಕಿಯರು ಗೌರವಿಸಿದರು. ವಿದ್ಯಾರ್ಥಿಗಳು, ರಕ್ಷಕರಿಗೆ ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.

You cannot copy contents of this page