ಅಂಚೆ ಮತಗಳಲ್ಲಿ ತಿದ್ದುಪಡಿ ನಡೆಸಿರುವುದಾಗಿ ಹೇಳಿಕೆ: ಸಿಪಿಎಂ ನೇತಾರ ಜಿ. ಸುಧಾಕರನ್‌ರಿಂದ ಚುನಾವಣಾ ಅಧಿಕಾರಿಗಳು ಮಾಹಿತಿ ಸಂಗ್ರಹ

ಆಲಪ್ಪುಳ: ಚುನಾವಣೆಯಲ್ಲಿ ಅಂಚೆ ಮತಗಳಲ್ಲಿ ತಿದ್ದುಪಡಿ ನಡೆಸಲಾಯಿತೆಂಬ ಬಗ್ಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಹಿರಿಯ ಸಿಪಿಎಂ ನೇತಾರ, ಮಾಜಿ ಸಚಿವರಾದ ಜಿ. ಸುಧಾಕರನ್ ವಿರುದ್ಧ ಕೇಸು ದಾಖಲಿಸಲಾಗುವುದೆಂಬ ಸೂಚನೆಯಿದೆ. ಈ ಬಗ್ಗೆ ತುರ್ತು ಕ್ರಮಕ್ಕಾಗಿ ಜಿಲ್ಲಾ ಚುನಾವಣಾ ಅಧಿಕಾರಿಗೆ ಮುಖ್ಯ ಚುನಾವಣಾ ಆಯುಕ್ತರು ನಿರ್ದೇಶ ನೀಡಿದ್ದಾರೆ. ಚುನಾವಣಾ ಅಧಿಕಾರಿಗಳು ಸುಧಾಕರನ್‌ರ ಆಲಪ್ಪುಳದ ಮನೆಗೆ ತಲುಪಿ ಅವರ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ರತನ್ ಯು. ಖೇಲ್‌ಕರ್ ತಿಳಿಸಿದ್ದಾರೆ. ಆಲಪ್ಪುಳದ ಎನ್‌ಜಿಒ ಯೂನಿಯನ್ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ. ಸುಧಾಕರನ್, 1989ರ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂ ಅಭರ್ಥಿಗಾಗಿ ಅಂಚೆ ಮತಗಳಲ್ಲಿ ತಿದ್ದುಪಡಿ ನಡೆಸಲಾಗಿದೆ ಎಂದು  ತಿಳಿಸಿದ್ದರು.

1989ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಆಲಪ್ಪುಳ ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಯಾಗಿದ್ದ ಕೆ.ವಿ. ದೇವದಾಸ್‌ಗಾಗಿ ಅಂಚೆ ಮತದಲ್ಲಿ ತಿದ್ದುಪಡಿ ನಡೆಸಿರುವುದಾಗಿ ಸುಧಾಕರನ್ ಬಹಿರಂಗಪಡಿಸಿದ್ದರು. ಸಿಪಿಎಂ ಸರ್ವೀಸ್ ಸಂಘಟನೆಗಳ 15 ಶೇಕಡಾ ಮಂದಿ ದೇವದಾಸ್‌ರಿಗೆ ವಿರುದ್ಧವಾಗಿದ್ದರು. ಇದರಿಂದ ಜಿಲ್ಲಾ ಕಮಿಟಿ ಕಚೇರಿಯಲ್ಲಿ ತಾನು ಸಹಿತ ಕೆಲವರು ಅಂಚೆ ಮತಗಳಲ್ಲಿ ತಿದ್ದುಪಡಿ ನಡೆಸಿರುವುದಾಗಿ ಸುಧಾಕರನ್ ತಿಳಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಕ್ಕಂ ಪುರುಷೋತ್ತಮನ್ ವಿರುದ್ಧ 25123 ಮತಗಳ ಅಂತರದಲ್ಲಿ ದೇವದಾಸ್ ಪರಾಭವಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page