ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸ್ ಕಾರ್ಯಾಚರಣೆ : 3೦೦೦ದಷ್ಟು ಗೋಣಿ ಚೀಲ ಹೊಯ್ಗೆ, ದೋಣಿ ವಶ

ಕಾಸರಗೋಡು: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಭರ್ಜರಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಂತೆ ಕಾಸರಗೋಡು, ಕುಂಬಳೆ ಮತ್ತು ಮಂಜೇಶ್ವರ ಪೊಲೀಸ್ ಠಾಣೆಗಳ ವ್ಯಾಪ್ತಿಗೊಳಪಟ್ಟ ಹಲವು ಅಕ್ರಮ ಮರಳುಗಾರಿಕಾ ಕೇಂದ್ರಗಳಿಗೆ ನಡೆಸಿದ ಕಾರ್ಯಾಚರಣೆಯಲ್ಲಿ 3೦೦೦ದಷ್ಟು ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಮರಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲ ಹೊಳೆಗಳಿಂದ ಹೊಗೆ ತೆಗೆಯಲು ಉಪಯೋಗಿಸಲಾಗುತ್ತಿದ್ದ ಹಲವು ನಾಡದೋಣಿಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಹೊಳೆಗಳಿಂದ ಅಕ್ರಮವಾಗಿ ಹೊಗೆ ತೆಗೆದು ಲಾರಿಗಳಲ್ಲಿ ಸಾಗಿಸಲೆಂದು ಗೋಣಿ ಚೀಲಗಳಲ್ಲಿ ತುಂಬಿಸಿ ಹೊಳೆಬದಿಯ ಹಲವು ಪೊದೆಗಳಲ್ಲಿ ಬಚ್ಚಿಡಲಾಗಿತ್ತು. ಮಾತ್ರವಲ್ಲ ಹೊಳೆಗಳಿಂದ ಹೊಗೆ ತೆಗೆಯಲು ಬಳಸಲಾಗುತ್ತಿದ್ದ ದೋಣಿಗಳನ್ನು ಅಲ್ಲೇ ಸಮೀಪ ಬಚ್ಚಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವ ಮಾಫಿಯಾಗಳನ್ನು ಪತ್ತೆಹಚ್ಚಿ ಮಟ್ಟಹಾಕಲು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅದರಿಂದಾಗಿ ಇಂತಹ ಕಾರ್ಯಾಚರಣೆ  ಮುಂದಿನ ದಿನಗಳಲ್ಲಿ ಇನ್ನೂ ಮುಂದುವರಿಸಲಾಗುವುದೆಂದೂ ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಕಾಸರಗೋಡು ಡಿವೈಎಸ್‌ಪಿಯ ಹೊಣೆಗಾರಿಕೆ ಹೊಂದಿರುವ ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್‌ರ ನೇತೃತ್ವದಲ್ಲಿ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.

Leave a Reply

Your email address will not be published. Required fields are marked *

You cannot copy content of this page