ಅಡೂರಿನ ವ್ಯಾಪಾರಿ ನಿಧನ ಅನಿರೀಕ್ಷಿತ ಆಘಾತದಿಂದ ಸ್ಥಳೀಯರಲ್ಲಿ ಶೋಕ

ಕಾಸರಗೋಡು: ಮನೆಯಿಂದ ಅಂಗಡಿಗೆಂದು ತೆರಳಲು ಸಿದ್ಧತೆಯಲ್ಲಿದ್ದಾಗ ಅಸ್ವಸ್ಥಗೊಂಡು ವ್ಯಾಪಾರಿ ಮೃತಪಟ್ಟ ಘಟನೆ ಅಡೂರಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಅಡೂರು ಬಸ್ ನಿಲ್ದಾಣ ಬಳಿಯ ರೋಯಲ್ ಮಾರ್ಟ್ಸ್ ಸುಪರ್ ಮಾರ್ಕೆಟ್ ಮಾಲಕ ಸಿರಾಜುದ್ದೀನ್ (38) ಮೃತಪಟ್ಟಿದ್ದು, ನಿನ್ನೆ ಬೆಳಿಗ್ಗೆ ೭ ಗಂಟೆಗೆ ಘಟನೆ ನಡೆದಿದೆ.

ಅಂಗಡಿಗೆ ತೆರಳಲು ಸಿದ್ಧತೆಯಲಿ ರುವಾಗ ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ಮನೆ ಮಂದಿ  ವೈದ್ಯರನ್ನು ಮನೆಗೆ ಕರೆಸಿದ್ದು, ಅವರು ಬಂದು ಪರಿಶೀಲಿಸಿ ನಿಧನ ಸಂಭವಿಸಿ ರುವುದನ್ನು ಖಚಿತಪಡಿಸಿದರು. ವೋಯ್ಸ್ ಆಫ್ ಅಡೂರು ಕ್ಲಬ್‌ನ ಅಧ್ಯಕ್ಷರಾಗಿದ್ದರು. ದಿ| ಅಬ್ದುಲ್ ರಹ್‌ಮಾನ್ ಹಾಜಿ-ಬೀಫಾತಿಮ್ಮ ದಂಪತಿ ಪುತ್ರನಾದ ಇವರು ತಾಯಿ, ಪತ್ನಿ ರಂಸೀನ, ಮಕ್ಕಳಾದ ಆಯಿಷಸಿದ, ಮುಹಮ್ಮದ್ ಫಾರಿದ್, ಫಾತಿಮಫೈರ, ಸಹೋದರರಾದ ಹನೀಫ್, ರಜಾಕ್, ಸಹೋದರಿಯರಾದ ಅಸ್ಮ, ಜಮೀಲ, ಸಲಾಮ, ಶಾಹಿನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page