ಅಡೂರು: ದೈವ ಕಲಾವಿದನ ಕೊಲೆ; ಆರೋಪಿಗೆ ರಿಮಾಂಡ್

ಅಡೂರು: ಉರುಡೂರು ಬಳಿಯ ಚಂದನಕ್ಕಾಡ್‌ನ ದೈವ ಕಲಾವಿದ ಟಿ. ಸತೀಶನ್‌ಯಾನೆ ಬಿಜು (46) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾದ ಚಂದನಕ್ಕಾಡ್‌ನ ಚಿದಾನಂದ (38) ಎಂಬಾತನನ್ನು  ಪೊಲೀಸರು ಬಂಧಿಸಿದ್ದಾರೆ. ಬಳಿಕ ಚಿದಾನಂದನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ. ಕಳೆದ ಮಂಗಳವಾರ ಸಂಜೆ ಸತೀಶನ್ ನೆರೆಮನೆ ನಿವಾಸಿ ಚೋಮಣ್ಣ ನಾಯ್ಕ್‌ರ ಮನೆ ವರಾಂಡದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಬಳಿಕ ಅವರನ್ನು  ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಇದೊಂದು ಕೊಲೆಯೆಂದು ಸಾಬೀತುಗೊಂಡಿತ್ತು.

Leave a Reply

Your email address will not be published. Required fields are marked *

You cannot copy content of this page