ಅಬಕಾರಿ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಾಹಸಿಕವಾಗಿ ಸೆರೆ
ಕುಂಬಳೆ: ಹಲವು ಅಬಕಾರಿ ಪ್ರಕರಣಗಳಲ್ಲಿ ವಾರಂಟ್ ಆರೋಪಿಯಾದಾತನನ್ನು ಕುಂಬಳೆ ಎಕ್ಸೈಸ್ ರೇಂಜ್ ಅಧಿಕಾರಿಗಳು ಅತೀ ಸಾಹಸಿಕ ಕಾರ್ಯಾಚರಣೆ ಯಲ್ಲಿ ಸೆರೆಹಿಡಿದಿದ್ದಾರೆ.
ಕುಡಾಲುಮೇರ್ಕಳ ವಿಲ್ಲೇಜ್ನ ಪೆರ್ಮುದೆ ಎಡಕ್ಕಾನ ನಿವಾಸಿ ವಿಷು ಕುಮಾರ್ (34) ಎಂಬಾತನನ್ನು ಬೇಳ ದರ್ಬೆತ್ತಡ್ಕದಿಂದ ಬಂಧಿಸಲಾಗಿದೆ.
2019ರ ಬಳಿಕ ಈತ ನಾಲ್ಕು ಅಬಕಾರಿ ಹಾಗೂ ಎನ್ಡಿಪಿಎಸ್ ಪ್ರಕರಣಗಳಲ್ಲಿ ಆರೋಪಿಯಾಗಿ ದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. 2019, 2021, 2022, 2023ರಲ್ಲಿ ಈತನ ವಿರುದ್ಧ ಅಬಕಾರಿ ಪ್ರಕರಣ ದಾಖಲಾಗಿದೆ. ಆದರೆ ಈತನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜ್ಯುಡೀಶಿಯಲ್ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ವಿಷು ಕುಮಾರ್ ವಿರುದ್ಧ ವಾರಂಟ್ ಹೊರಡಿಸಿತ್ತು. ಅನಂತರವೂ ಈತ ಸೆರೆಗೆ ಸಿಗದೆ ಕೇರಳ ಹಾಗೂ ಕರ್ನಾಟಕದ ವಿವಿಧೆಡೆಗಳಲ್ಲಿ ತಲೆಮರೆಸಿಕೊಂಡಿದ್ದನು. ಈತನಿಗಾಗಿ ಅಬಕಾರಿ ಅಧಿಕಾರಿಗಳು ಶೋಧ ನಡೆಸುತ್ತಿದ್ದ ವೇಳೆ ಈತನ ಮದುವೆ ಇತ್ತೀಚೆಗೆ ನಡೆದಿರುವು ದಾಗಿಯೂ, ಕ್ಷೇತ್ರವೊಂದರಲ್ಲಿ ಹೂಮಾಲೆ ಹಾಕುವ ಫೋಟೋ ಲಭಿಸಿತ್ತು. ಇದರ ಆಧಾರದಲ್ಲಿ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕ್ಷೇತ್ರವೊಂದಕ್ಕೆ ಅಬಕಾರಿ ಅಧಿಕಾರಿಗಳು ತೆರಳಿ ಕ್ಷೇತ್ರದ ಅಧಿಕೃತರಲ್ಲಿ ವಿಚಾರಿಸಿದಾಗ ವಿಷು ಕುಮಾರ್ ಮದುವೆಗಾಗಿ ಯುವತಿ ಯೊಂದಿಗೆ ಕ್ಷೇತ್ರಕ್ಕೆ ತಲುಪಿದ್ದು ದಾಗಿಯೂ ಆದರೆ ಅವರಲ್ಲಿ ದಾಖಲೆ ದಾಖಲೆಪತ್ರಗಳಿಲ್ಲ ದುದರಿಂದ ಮದುವೆ ನಡೆದಿಲ್ಲ ಬದಲಾಗಿ ಹೂಮಾಲೆ ಹಾಕಿ ತೆರಳಿರುವುದಾಗಿ ತಿಳಿದುಬಂತು. ಅನಂತರ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಿಷು ಕುಮಾರ್ ಬೇಳ ದರ್ಬೆತ್ತಡ್ಕದಲ್ಲಿರುವ ಪತ್ನಿ ಮನೆಯಲ್ಲಿರುವ ವಿಷಯ ತಿಳಿದು ಬಂದಿದೆ. ಇದರಂತೆ ಅಲ್ಲಿಗೆ ನಿನ್ನೆ ಅಪರಾಹ್ನ ೩ ಗಂಟೆಗೆ ಅಧಿಕಾರಿಗಳು ತೆರಳಿ ಮನೆಯನ್ನು ಸುತ್ತುವರಿದು ಶೋಧ ನಡೆಸಿದಾಗ ವಿಷು ಕುಮಾರ್ ಪತ್ತೆಯಾಗಿದ್ದು, ಕೂಡಲೇ ಆತನನ್ನು ಸೆರೆಹಿಡಿಯಲಾಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ.
ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಕುಂಬಳೆ ಅಬಕಾರಿ ರೇಂಜ್ ಆಫೀಸರ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಎಂ. ಅನೀಶ್ ಕುಮಾರ್, ಪ್ರಿವೆಂಟೀವ್ ಆಫೀಸರ್ ಪೀತಾಂಬರನ್ ಕೆ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅಖಿಲೇಶ್ ಎಂ.ಎಂ, ಸುರ್ಜಿತ್ ಕೆ, ಸಿಇಒ ಚಾಲಕ ಪ್ರವೀಣ್ ಕುಮಾರ್ ಪಿ ಮೊದಲಾದವರಿದ್ದರು.