ಅವಯವಗಳಿಗಾಗಿ ರಾಜ್ಯದಲ್ಲಿ ಕಾದು ನಿಂತಿರುವವರು 2767 ಮಂದಿ
ಕಾಸರಗೋಡು:ಆರೋಗ್ಯರAಗದಲ್ಲಿ ಮುಂಚೂಣಿಗೆ ತಲುಪಲು ಪ್ರಯಾಣಿಸುತ್ತಿರುವ ಕೇರಳ ಅವಯವ ದಾನದಲ್ಲಿ ಭಾರೀ ಹಿನ್ನಡೆಯಲ್ಲಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳ 12ನೇ ಸ್ಥಾನದಲ್ಲಿದೆ. ಅವಯವ ದಾನಕ್ಕೆ ಅನುಮತಿ ತಿಳಿಸಿ 51506 ಮಂದಿ ಹೆಸರು ನೋಂದಾಯಿಸಿರುವ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. ಕೇರಳದಲ್ಲಿ 5891 ಮಂದಿ ಮಾತ್ರವೇ ಹೆಸರು ನೋಂದಾಯಿಸಿದ್ದಾರೆ. ಕಳೆದ 13 ವ ರ್ಷಗಳ ಮಧ್ಯೆ 387 ಮಂದಿ ಮಾತ್ರವೇ ಕೇರಳದಲ್ಲಿ ಮರಣಾನಂತರ ಅವಯವ ದಾನ ಮಾಡಲಾಗಿದೆ. 1108 ಅವಯವ ಬದಲಾವಣೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ವರ್ಷ ಇದುವರೆಗೆ ಮೆದುಳಿನ ಅಪಘಾತ ಸಂಭವಿಸಿದ 9 ಮಂದಿಯಿAದ 24 ಅವಯವ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2767 ಮಂದಿ ಅವಯವದಾನದ ಮೇಲ್ನೋಟ ವಹಿಸುವ ಕೆಸೋಟೆ (ಕೇರಳ ಸ್ಟೇಟ್ ಆರ್ಗನ್ ಆಂಡ್ ಟಿಶ್ಯೂ ಟ್ರಾನ್ಸ್ಪ್ಲಾಂಟ್ ಆರ್ಗನೈಸೇಶನ್)ದಲ್ಲಿ ಹೆಸರು ನೋಂದಾಯಿಸಿದ್ದಾರೆ. ಮೆದುಳಿನ ಆಘಾತ, ಮರಣ ದೃಢೀಕರಿಸುವ ಸಂಬAಧ ಹುಟ್ಟಿಕೊಳ್ಳುವ ಕಾನೂನು ಅಡಚಣೆಗಳು ಹಾಗೂ ಆಸ್ಪತ್ರೆಗಳಿಗೆ ಸಾವು ದೃಢೀಕರಿಸುವಲ್ಲಿ ಉಂಟಾದ ಕಡಿತವೇ ಅವಯವದಾನ ಕಡಿಮೆಯಾಗಲು ಪ್ರಧಾನ ಕಾರಣವಾಗಿದೆ. ಇದೇ ವೇಳ ಜೀವಿಸುವವರ ಅವಯವ ಬದಲಾವಣೆ ಶಸ್ತ್ರಚಿಕಿತ್ಸೆ ಹೆಚ್ಚಿರುವುದಾಗಿ ತಿಳಿದುಬಂದಿದೆ.
ಅಯವ ಅಗತ್ಯಗಳಿಗಾಗಿ ರಾಜ್ಯದಲ್ಲಿ ಕಾದು ನಿಂತಿರುವವರ ಸಂಖ್ಯೆ ಈ ರೀತಿಯಿದೆ: ಕಿಡ್ನಿ-2128 ಮಂದಿ, ಪಿತ್ತ ಜನಕಾಂಗ-492, ಹೃದಯ-82,ಶ್ವಾಸಕೋಶ-1, ಪ್ಯಾನ್ ಕ್ರಿಯಾಸ್-5, ಕರುಳು-3, ಕೈ-6, ಕಾರ್ನಿಯ-20, ಒಂದಕ್ಕಿAತ ಹೆಚ್ಚು ಅವಯವ-30 ಮಂದಿ. ಈ ಪೈಕಿ ಅತೀ ಹೆಚ್ಚು ಮಂದಿ ಕಿಡ್ನಿಗಾಗಿ ಕಾಯುತ್ತಿದ್ದಾರೆ ಎಂದು ಲೆಕ್ಕಾಚಾರಗಳಿಂದ ತಿಳಿದುಬಂದಿದೆ. 2128 ಮಂದಿಗೆ ಕಿಡ್ನಿ ಅಗತ್ಯವಿದ್ದು, ಈ ಪೈಕಿ ಈ ವರ್ಷ 14 ಕಿಡ್ನಿ ದಾನ ಮಾಡಲಾಗಿದೆ. 2024ಕ್ಕೆ 19, 2023ಕ್ಕೆ 32, 2022ರಲ್ಲಿ 28 ಮಂ ದಿ ಕಿಡ್ನಿ ದಾನ ಮಾಡಿದ್ದಾರೆ. ಅವಯವ ದಾನಕ್ಕೆ ರಾಜ್ಯ ಮಟ್ಟದಲ್ಲಿ ಅನುಮತಿ ತಿಳಿದವರ ಸಂಖ್ಯೆ ಹೀಗಿದೆ: ಮಹಾರಾಷ್ಟ್ರ-51506 ಮಂದಿ, ರಾಜಸ್ಥಾನ-43595, ಕರ್ನಾಟಕ-37032, ಗುಜರಾತ್-36870, ಮಧ್ಯಪ್ರದೇಶ-23275, ತೆಲಂಗಾನ-14820, ಉತ್ತರಪ್ರದೇಶ-11856, ತಮಿಳುನಾಡು-10300, ಆಂಧ್ರಪ್ರದೇಶ-8398, ಒಡಿಸ್ಸಾ-7185, ಪಶ್ಚಿಮ ಬಂಗಾಲ-6097, ಕೇರಳ-5874 ಮಂದಿ.