ಅಸೌಖ್ಯ: ಚಾಲಕ ನಿಧನ
ಬದಿಯಡ್ಕ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಚಾಲಕ ಮೃತಪಟ್ಟರು. ಮೂಕಂಪಾರೆ ನಿವಾಸಿ ಹಾಗೂ ಕನ್ಯ ಪ್ಪಾಡಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ವೆಂಕಟೇಶ್ (60) ಮೃತಪಟ್ಟವರು. ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಆದಿತ್ಯವಾರ ಸಂಜೆ ನಿಧನ ಸಂ ಭವಿಸಿದೆ. ಖಾಸಗಿ ಬಸ್, ಲಾರಿಗಳಲ್ಲಿ ಚಾಲಕನಾಗಿದ್ದರು. ಮೃತರು ಪತ್ನಿ ಕಲಾವತಿ, ಮಕ್ಕಳಾದ ಅರ್ಷಿತಾ, ಅವಿನಾಶ್, ಅಳಿಯ ಜಯಪ್ರಕಾಶ್ ಮಂಗಳೂರು, ಸಹೋದರಿಯರಾದ ಬೇಬಿ, ಪುಷ್ಪಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಪುತ್ರಿ ಶ್ರುತಿ ಈ ಹಿಂದೆ ನಿಧನ ಹೊಂದಿದ್ದಾರೆ.