ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು
ಕಾಸರಗೋಡು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಕುಂಡಂಗುಳಿ ನೆಡುಂಬಯಲ್ ನಿವಾಸಿ ರಮ್ಯ (37) ಮೃತಪಟ್ಟ ಯುವತಿ. ಒಂದು ತಿಂಗಳಿನಿಂದ ಇವರು ತಲಶ್ಶೇ ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಕುಂಡಂಗುಳಿ ನೆಡುಂಬಯಲಿನ ಟೈಲರ್ ವಿ.ಪಿ. ಗೋವಿಂದನ್- ಪದ್ಮಾವತಿ ದಂಪತಿಯ ಪುತ್ರಿಯಾದ ಮೃತರು ಪತಿ ರವೀಂದ್ರನ್ (ಬಂದಡ್ಕ), ಸಹೋದರ ರಾಜೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.