ಆಂಬುಲೆನ್ಸ್‌ಗೆ ಅಗ್ನಿಶಾಮಕದಳದ ವಾಹನ ಢಿಕ್ಕಿ: ಚಾಲಕ ಮೃತ್ಯು

ಕಣ್ಣೂರು: ತಲಶ್ಶೇರಿಯಲ್ಲಿ ಆಂಬುಲೆನ್ಸ್ ಹಾಗೂ ಅಗ್ನಿಶಾಮಕದಳದ ವಾಹನ ಪರಸ್ಪರ ಢಿಕ್ಕಿಯಾಗಿ ಆಂಬುಲೆನ್ಸ್ ಚಾಲಕ ಮೃತಪಟ್ಟರು ಏಳಾಂಕೋಟ್ ನಿವಾಸಿ ಮಿಥುನ್ ಮೃತಪಟ್ಟವರು. ನಿನ್ನೆ ರಾತ್ರಿ ೧೧ ಗಂಟೆಗೆ ಅಪಘಾತ ಸಂಭವಿಸದೆ. ಪರಿಯಾರಂ ಮೆಡಿಕಲ್ ಕಾಲೇಜಿನಿಂದ ಮೃತದೇಹದೊಂದಿಗೆ ಆಗಮಿಸುತ್ತಿದ್ದ ಆಂಬುಲೆನ್ಸ್ ಹಾಗೂ ಕುಳಂಬಜಾರ್‌ಗೆ ತೆರಳಿದ್ದ ಅಗ್ನಿಶಾಮಕದಳದ ವಾಹನ ಮುಖಾಮುಖಿಯಾಗಿದೆ. ಗಂಭೀರ ಗಾಯಗೊಂಡ ಆಂಬುಲೆನ್ಸ್ ಚಾಲಕನನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಆಂಬುಲೆನ್ಸ್‌ನಲ್ಲಿದ್ದ ಮೃತದೇಹವನ್ನು ಇನ್ನೊಂದು ಆಂಬುಲೆನ್ಸ್‌ನಲ್ಲಿ ಕೊಂಡುಹೋಗಲಾಯಿತು.

Leave a Reply

Your email address will not be published. Required fields are marked *

You cannot copy content of this page