ಆಟೋ ಚಾಲಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ಆಟೋ ಚಾಲಕನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಾರ್ಪನಡ್ಕ ಬಳಿ ಸಂಭವಿಸಿದೆ. ಮಾರ್ಪನಡ್ಕ ಬೆದ್ರುಕೂಡ್ಲು ಮಹಾಬಲತೊಟ್ಟಿ ಎಂಬಲ್ಲಿನ ದಿ| ಬಾಲಕೃಷ್ಣ ಮಣಿಯಾಣಿಯವರ ಪುತ್ರ ಮನೋಹರ (25) ಮೃತಪಟ್ಟ ಯುವಕ. ಇವರು ಮಾರ್ಪನಡ್ಕದಲ್ಲಿ ಆಟೋ ರಿಕ್ಷಾ ಚಾಲಕನಾಗಿದ್ದರು. ನಿನ್ನೆ ರಾತ್ರಿ 10ಗಂಟೆ ವೇಳೆ ಮನೆ ಸಮೀಪದ ರಬ್ಬರ್ ತೋಟದಲ್ಲಿ ಮನೋಹರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರು ತಾಯಿ ಶಾರದಾ, ಪತ್ನಿ ಅಂಜಲಿ, ಸಹೋ ದರರಾದ ಕಿರಣ್ ಕುಮಾರ್, ಪ್ರವೀಣ್ ಕುಮಾರ್, ಸಹೋದರಿ ಚಿತ್ರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.