ಉಣ್ಣಿತ್ತಾನ್‌ರ ಜಯ ಪ್ರಜಾಪ್ರಭುತ್ವದ ವಿಜಯ- ಪಿ.ಕೆ. ಫೈಸಲ್

ಕಾಸರಗೋಡು: ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಇರುವ ಮಹತ್ತರವಾದ ಅಂಗೀಕಾರವಾಗಿದೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ರಾಜ್‌ಮೋಹನ್ ಉಣ್ಣಿತ್ತಾನ್‌ರ ಜಯ ಎಂದು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಹೇಳಿಕೆ ನೀಡಿದ್ದಾರೆ. ಪ್ರಾಮಾಣಿಕವಾದ ಜನಸೇವೆ ಯಿಂದ ಅವರು ಕಳೆದ ಐದು ವರ್ಷ ದಲ್ಲಿ ಕಾಸರಗೋಡು ಕ್ಷೇತ್ರದಲ್ಲಿ ಮಾದರಿ ಚಟುವಟಿಕೆ ನಡೆಸಿದ್ದಾರೆ. ಬಿಜೆಪಿ ಸರಕಾರ ಕೇಂದ್ರದಲ್ಲಿದ್ದರೂ ಇವರ ಮಧ್ಯ ಪ್ರವೇಶದಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ಕಾಸರ ಗೋಡು ಪಾರ್ಲಿಮೆಂಟ್ ಮಂಡಲದಲ್ಲಿ ಉಂಟುಮಾಡಲು ಉಣ್ಣಿತ್ತಾನ್‌ರಿಗೆ ಸಾಧ್ಯವಾಗಿದೆ.

ಇದಕ್ಕಿರುವ ಅಂಗೀಕಾರವಾಗಿದೆ ಅವರು ದ್ವಿತೀಯ ಬಾರಿಗೂ ಕಾಸರಗೋಡಿನಿಂದ ಜಯಗಳಿಸಿರುವುದು ಎಂದು ಅವರು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *

You cannot copy content of this page