ಎಂ.ಕಾಂ ವಿದ್ಯಾರ್ಥಿನಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಎಂಕಾಂ ವಿದ್ಯಾರ್ಥಿನಿಯಾದ ಯುವತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜೇಶ್ವರ ಬಳಿಯ ಕೆದುಂಬಾಡಿ ನಿವಾಸಿ ಇಬ್ರಾಹಿಂ ಎಂಬವರ ಪುತ್ರಿ ಆಮಿನತ್  ರಯಾನ (22) ಮೃತಪಟ್ಟ ಯುವತಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ 2.30ರ ವೇಳೆ ಬೆಡ್‌ರೂಂಗೆ ತೆರಳಿದ ಆಮಿನತ್ ರಯಾನ ದೀರ್ಘ ಹೊತ್ತಾದರೂ ಹೊರ ಬಂದಿರಲಿಲ್ಲ. ಇದರಿಂದ ತಾಯಿ ಕರೆದರೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ತೆರೆದು ನೋಡಿದಾಗ ಯುವತಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರ.   ಕೂಡಲೇ ಆಕೆಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ನಿನ್ನೆ ಸಂಜೆ ಕೆದುಂಬಾಡಿ. ಜುಮಾ ಮಸೀದಿ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಆಮಿನತ್ ರಯಾನ ಆನ್‌ಲೈನ್ ಮೂಲಕ ಎಂಕಾಂ ಕಲಿಯುತ್ತಿದ್ದರೆನ್ನಲಾಗಿದೆ. ಆದರೆ ದಿಢೀರ್ ಆಕೆ ನೇಣು ಬಿಗಿದು ಸಾವಿಗೀಡಾಲು ಕಾರಣವೇನೆಂದು ತಿಳಿದುಬಂದಿಲ್ಲವೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತಳು ತಂದೆ, ತಾಯಿ ಆಯಿಶ, ಸಹೋದರ ಖಲೀಲ್ (ಗಲ್ಫ್), ಸಹೋದರಿ ಇರ್ಫಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳ.

Leave a Reply

Your email address will not be published. Required fields are marked *

You cannot copy content of this page