ಎಡರಂಗದ ಎಂ.ವಿ. ಬಾಲಕೃಷ್ಣನ್ ಸೇರಿದಂತೆ ಒಟ್ಟು ಮೂವರು ಬಾಲಕೃಷ್ಣರು ಸ್ಪರ್ಧಾ ಕಣದಲ್ಲಿ
ಕಾಸರಗೋಡು: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಂತಿಮ ದಿನ ನಿನ್ನೆ ಕೊನೆಗೊಂಡಿ ರುವಂತೆಯೇ ನಾಮಪತ್ರ ಸಲ್ಲಿಸಿದವರಲ್ಲಿ ಮೂವರು ಬಾಲಕೃಷ್ಣನ್ರು ಒಳಗೊಂಡಿದ್ದಾರೆ. ಎಡರಂಗ ಉಮೇದ್ವಾರ ಎಂ.ವಿ. ಬಾಲಕೃಷ್ಣನ್ ಮೊನ್ನೆ ನಾಮಪತ್ರ ಸಲ್ಲಿಸಿದ್ದರು. ಅದಾದ ಬೆನ್ನಲ್ಲೇ ಬಾಲಕೃಷ್ಣನ್ ಚೆಮ್ಮಂಚೇರಿ ಮತ್ತು ಎನ್. ಬಾಲಕೃಷ್ಣನ್ ಎಂಬವರು ನಿನ್ನೆ ಪಕ್ಷೇತರ ಉಮೇದ್ವಾರರಾಗಿ ನಾಮಪತ್ರ ಸಲ್ಲಿಸಿದ್ದಾರೆ.