ಎಲ್ಲೆಲ್ಲೂ ಸ್ಮಾರ್ಟ್ ಆಗುತ್ತಿದೆ: ಆದರೆ ಚಿಪ್ಪಾರಿನಲ್ಲಿ ಅಂಗನವಾಡಿಯಲ್ಲಿ ಅವ್ಯವಸ್ಥೆ; ನೂತನ ಕಟ್ಟಡಕ್ಕೆ ಮೀನ-ಮೇಷ
ಪೈವಳಿಕೆ: ಜಿಲ್ಲೆಯ ಅಂಗನವಾಡಿ ಗಳು ಸ್ಮಾರ್ಟ್ ಆಗುತ್ತಿರುವ ಮಧ್ಯೆ ಪೈವಳಿಕೆ ಪಂಚಾಯತ್ನ 19ನೇ ವಾರ್ಡ್ ಚಿಪ್ಪಾರುನಲ್ಲಿರುವ ಅಂಗನವಾಡಿ ಕಟ್ಟಡ ಬಿರುಕು ಬಿಟ್ಟು ಯೋಗ್ಯವಲ್ಲವೆಂದು ಅಧಿಕಾರಿಗಳು ತಿಳಿಸಿ ಹಲವು ವರ್ಷ ಕಳೆದರೂ ನೂತನ ಕಟ್ಟಡ ನಿರ್ಮಾಣಕ್ಕೆ ಮೀನ-ಮೇಷ ಎಣಿಸುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ. ಇದೀಗ ಅವ್ಯವಸ್ಥೆಹೊಂದಿರುವ ಅಮ್ಮೇರಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ಕಾರ್ಯಾಚರಿಸುತ್ತಿದೆ. ಆದರೆ ಸರಿಯಾದ ದಾರಿಯ ಸೌಕರ್ಯ ಇಲ್ಲದಿರುವುದ ರಿಂದ ಮಕ್ಕಳ ಸಂಖ್ಯೆ ಕಡಿಮೆಗೊಂ ಡಿರುವುದಾಗಿ ಊರವರು ತಿಳಿಸಿದ್ದಾರೆ. ಈ ಹಿಂದೆ ಅಧಿಕಾರಿಗಳು ಅಂಗನವಾ ಡಿಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿ ಅಂಗನವಾಡಿ ಕಟ್ಟಡಕ್ಕೆ ಅಪಾಯವಿದೆ ಎಂದು ತಿಳಿಸಿ ತೆರಳಿದ್ದರು. ಆದರೆ ನೂತನ ಕಟ್ಟಡ ಮಂಜೂರುಗೊAಡಿರುವುದಾಗಿ ಹೇಳಲÁಗುತ್ತಿದ್ದರೂ ಇದು ವರೆಗೂ ನಿರ್ಮಾಣದ ಬಗ್ಗೆ ಯಾವುದೇ ಸೂಚನೆಯಿಲ್ಲ ಎಂಬುದಾಗಿ ಊರ ವರು ತಿಳಿಸಿದ್ದಾರೆ. ಈ ಅಂಗನವಾಡಿಗೆ ದಿ| ಅಹಮ್ಮದ್ ಹಾಜಿ ಖಂಡಿಗೆ ಸ್ಥಳ ದಾನ ಮಾಡಿದ್ದು, 1999ರಲಿ ದಿ| ಚಿಪ್ಪಾರು ಐತ್ತಪ್ಪ ಶೆಟ್ಟಿಗಾರ್ ಕಟ್ಟಡ ವನ್ನು ಉದಾರವಾಗಿ ನಿರ್ಮಿಸಿದ್ದರು. ಬಳಿಕ ಸರಕಾರಕ್ಕೆ ಹಸ್ತಾಂತರಿಸಿರುವು ದಾಗಿ ಊರವರು ತಿಳಿಸಿದ್ದಾರೆ. ಸಂಬAಧ ಪಟ್ಟ ಅಧಿಕಾರಿಗಳು ತಾತ್ಕಾ ಲಿಕವಾಗಿ ಅವ್ಯವಸ್ಥೆಯಲ್ಲಿರುವ ಕಟ್ಟಡ ದಿಂದ ಅಂಗನವಾಡಿಯನ್ನು ವ್ಯವಸ್ಥಿತ ರೀತಿಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸ ಬೇಕು ಹಾಗೂ ನೂತನ ಕಟ್ಟಡವನ್ನು ಶೀಘ್ರವಾಗಿ ನಿರ್ಮಿಸ ಬೇಕೆಂದು ಊರವರು ಒತ್ತಾಯಿಸಿದ್ದಾರೆ.