ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ

ತಲಪಾಡಿ: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಹೊಳೆಯಲ್ಲಿ ಪತ್ತೆಯಾಗಿದೆ.

ಉಳ್ಳಾಲ ಸೋಮೇಶ್ವರ ನಿವಾಸಿ ಎಂ. ಗೌತಂ (೩೦) ಎಂಬವರ ಮೃತದೇಹ ನೇತ್ರಾವತಿ ಹೊಳೆಯ ತೊಕ್ಕೋಟು ಭಾಗದಲ್ಲಿ ಪತ್ತೆಯಾಗಿ ದೆ. ಗೌತಂ ಈ ತಿಂಗಳ ೧೯ರಿಂದ ನಾಪತ್ತೆಯಾಗಿದ್ದಾರೆನ್ನಲಾಗಿದೆ. ಇವರು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿ ದ್ದರು. ಸೋಮವಾರ ಸಂಜೆ  ತೊಕ್ಕೋಟು ಸಮೀಪ ದೈವಕ್ಷೇತ್ರ ದಲ್ಲಿ ನಡೆದ ಕಾರಯಕ್ರಮದಲ್ಲಿ ಭಾಗವಹಿಸಿದ್ದ ಗೌತಂ ರಾತ್ರಿ ತಡವಾಗಿ ಮನೆಗೆ ಮರಳಿದ್ದರೆನ್ನ ಲಾಗಿದೆ. ಅನಂತರ ಅವರು ನಾಪತ್ತೆ ಯಾಗಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಸಂಬಂಧಿಕರು ಉಳ್ಳಾಲ  ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹಾಗೂ ಸಂಬಂಧಿಕರು ಶೋಧ ನಡೆಸುತ್ತಿದ್ದ ವೇಳೆ ಮೃತದೇಹ ಹೊಳೆಯಲ್ಲಿ ಕಂಡುಬಂದಿದೆ.

Leave a Reply

Your email address will not be published. Required fields are marked *

You cannot copy content of this page