ಔಷಧಾಲಯದಿಂದ ಹಣ ಕಳವು ಆರೋಪಿ ಗಂಟೆಗಳೊಳಗೆ ಸೆರೆ

ಉಪ್ಪಳ: ಹೊಸಂಗಡಿಯಲ್ಲಿರುವ ಆಯುರ್ವೇದ ಔಷಧಾಲಯದಿಂದ ಹಣ ಕಳವು ನಡೆಸಿದ ಕುಖ್ಯಾತ ಆರೋಪಿಯನ್ನು ಪೊಲೀಸರು ಗಂಟೆಗಳೊಳಗೆ ಸೆರೆಹಿಡಿದಿದ್ದಾರೆ.

ಕರ್ನಾಟಕದ ಪುತ್ತೂರು ನಿವಾಸಿಯೂ ಹೊಸಂಗಡಿ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುವ ಅಶ್ರಫ್ (45) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ.ಬಂಗ್ರಮಂಜೇಶ್ವರ ಭಟ್ಟರಹಿತ್ತಿಲು ನಿವಾಸಿ ಡಾ| ಬಿ.ಎಂ. ಜಗದೀಶರ ಹೊಸಂಗಡಿಯಲ್ಲಿರುವ ಆಯುರ್ವೇದ ಔಷಧಾಲಯದಿಂದ 10 ಸಾವಿರ ರೂಪಾಯಿ ಕಳವು ನಡೆಸಿದ ಪ್ರಕರಣ ದಲ್ಲಿ ಅಶ್ರಫ್‌ನನ್ನು ಬಂಧಿಸಲಾಗಿದೆ. ನಿನ್ನೆ ಬೆಳಗ್ಗೆ ಡಾ| ಜಗದೀಶ್ ಔಷಧಾಲಯಕ್ಕೆ ತೆರಳಿದಾಗ ಅದರ ಶಟರ್ ಮುರಿದ ಸ್ಥಿತಿಯಲ್ಲಿತ್ತು. ಒಳಗೆ ನೋಡಿದಾಗ ಡ್ರವರ್‌ನಲ್ಲಿದ್ದ 10 ಸಾವಿರ ರೂಪಾಯಿ ಕಳವು ನಡೆದಿರುವುದು ಕಂಡುಬಂದಿತ್ತು. ಈ ಬಗ್ಗೆ ಅವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ತಲುಪಿ ಸಿಸಿ ಟಿವಿ ಪರಿಶೀಲಿಸಿದಾಗ ನಿನ್ನೆ ಮುಂಜಾನೆ ೨.೩೦ರಿಂದ ೩ ಗಂಟೆ ಮಧ್ಯೆ ಕಳ್ಳ  ಕಳವು ನಡೆಸಿರುವುದು ತಿಳಿದುಬಂದಿದೆ. ಸಿಸಿ ಟಿವಿಯಲ್ಲಿ ಕಂಡುಬಂದ ವ್ಯಕ್ತಿಯ ಗುರುತು ಹಚ್ಚಿದ ಎಸ್‌ಐ ಉಮೇಶ್ ನೇತೃತ್ವದ ಪೊಲೀಸರು ಶೀಘ್ರ ಕಾರ್ಯಾಚರಣೆ ಆರಂಭಿಸಿ ಆರೋಪಿಯಾದ ಅಶ್ರಫ್‌ನನ್ನು ನಿನ್ನೆ ಮಧ್ಯಾಹದೊಳಗೆ ಸೆರೆಹಿಡಿದಿದ್ದಾರೆ.  ಬಂಧಿತ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು, ಆ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page