ಕಣಿಪುರ ಕ್ಷೇತ್ರದಲ್ಲಿ ಪಂಚಾಮೃತ, ಎಳನೀರು ಅಭಿಷೇಕ 11ರಂದು

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪಂಚಾಮೃತ, ಎಳನೀರು ಅಭಿಷೇಕ ಈ ತಿಂಗಳ 11ರಂದು ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಪಂಚಾಮೃತ ಮತ್ತು ಎಳನೀರು ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ಶ್ರೀಬಲಿ, 1ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ದೀಪಾರಾಧನೆ ಬಳಿಕ ಭಜನೆ, ರಾತ್ರಿ 7.30ರಿಂದ ಮಹಾಪೂಜೆ, ಶ್ರೀಬಲಿ, ಬಟ್ಟಲು ಕಾಣಿಕೆ ನಡೆಯಲಿದೆ. ಪ್ರತೀ ವರ್ಷ ಆರಾಟು ಮಹೋತ್ಸವದ ಮರುದಿನ ನಡೆಯುತ್ತಿದ್ದ ಅಭಿಷೇಕ ವರ್ಷ ಬ್ರಹ್ಮಕಲಶದ ಬಳಿಕ ದಢಕಲಶ ನಡೆಯಲಿರುವ ಕಾರಣ ಈ ತಿಂಗಳ 11ರಂದು ನಡೆಸಲು ತೀರ್ಮಾನಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page