ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ನಾಳೆ ೧೦೦೮ ಬ್ರಹ್ಮಕಲಶಾಭಿಷೇಕ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ದಂಗವಾಗಿ ನಾಳೆ ಬೆಳಿಗ್ಗೆ ೧೦೦೮ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು. ನಾಳೆ ಬೆಳಿಗ್ಗೆ ೬ಕ್ಕೆ ಗಣಪತಿ ಹೋಮದೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದೆ. ರಾತ್ರಿ ೭ರಿಂದ ಮಂತ್ರಾಕ್ಷತೆ, ಮಹಾ ಅನ್ನ ಸಂತರ್ಪಣೆ, ಶ್ರೀ ದೇವರ ಉತ್ಸವ ಬಲಿ ನಡೆಯಲಿದೆ. ಇಂದು ಸಂಜೆ ೪ಕ್ಕೆ ಮಾತೃಸಂಗಮ ನಡೆಯಲಿದೆ. ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡವರು. ಡಾ| ಶಾಂಭವಿ ಕಿಶೋರ್ ಕುಮಾರ್ ಕುಂಬಳೆ ಅಧ್ಯಕ್ಷತೆ  ವಹಿಸುವರು. ಹಿಂದೂ ಐಕ್ಯವೇದಿ ರಾಜ್ಯ ಅಧ್ಯಕ್ಷೆ ಕೆ.ಪಿ. ಶಶಿಕಲಾ ಟೀಚರ್ ಧಾರ್ಮಿಕ ಉಪನ್ಯಾಸ ನೀಡುವರು.

ನಾಳೆ ಸಂಜೆ ೫.೩೦ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಕಟೀಲು ಕ್ಷೇತ್ರ ಅನುವಂಶೀಯ ಮೊಕ್ತೇಸರ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡುವರು. ಹಲವರು ಗಣ್ಯರು ಉಪಸ್ಥಿತರಿರುವರು.

ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಇಂದು ಒಳ ವೇದಿಕೆಯಲ್ಲಿ ವಿವಿಧ ಭಜನಾ ಝೇಂಕಾರ್ ನಡೆಯುತ್ತಿದೆ. ಹೊರ ವೇದಿಕೆಯಲ್ಲಿ ಮಧ್ಯಾಹ್ನ ೧.೩೦ರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ೮ಕ್ಕೆ ಹಿಂದುಸ್ಥಾನಿ ಸಂತ ಹಾಗೂ ದಾಸವಾಣಿ, ೧೦ರಿಂದ ಕೈಕೊಟ್ಟುಕಳಿ ನಡೆಯಲಿದೆ.  ಒಳವೇದಿಕೆಯಲ್ಲಿ ನಾಳೆ ಬೆಳಿಗ್ಗೆ ೬ರಿಂದ ಭಜನಾ ಝೇಂಕಾರ್, ೧೦ರಿಂದ ವಿದುಷಿ ಗೀತಾ ಸಾರಡ್ಕ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹರಿದಾಸ್ ಜಯಾನಂದಕುಮಾರ್ ಹೊಸದುರ್ಗ ಅವರಿಂದ ಹರಿಕಥಾ ಸತ್ಸಂಗ, ೭.೩೦ಕ್ಕೆ ಉತ್ಸವ, ಪ್ರದಕ್ಷಿಣೆ ಬಲಿ, ಹೊರ ವೇದಿಕೆಯಲ್ಲಿ ಬೆಳಿಗ್ಗೆ ೧೦ರಿಂದ ಡಾ. ಶೋಭಿತಾ ಸತೀಶ್ ಪುತ್ತೂರು ಅವರಿಂದ ಸುಗಮ ಸಂಗೀತ, ೧೧.೩೦ರಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ, ಮಧ್ಯಾಹ್ನ ೧.೩೦ರಿಂದ ದೀಪಶ್ರೀ ದೊಡ್ಡಮಾಣಿ ಇವರ ಕಲಾರ್ಪಣಂ ತಂಡ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಸಂಜೆ ೪ಕ್ಕೆ ಕಲಾರತ್ನ ಜಯರಾಮ ಮತ್ತು ಬಳಗದಿಂದ ನಾಗಸ್ವರವಾದನ, ರಾತ್ರಿ ೧೦ರಿಂದ ಸೂಡ ಮಯೂರ ವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಹಾಗೂ ಹನುಮಗಿರಿ ಮೇಳದ ಕಲಾವಿದರಿಂದ ಯಕ್ಷಗಾನ ಬಯಲಾಟ ‘ಶ್ರೀಕೃಷ್ಣ ಚರಿತೆ’ ಪ್ರದರ್ಶನಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page