ಕಳಪೆ ಕಾಮಗಾರಿ: ಕುಡಿಯುವ ನೀರಿನ ಪೈಪ್ ಸ್ಥಾಪಿಸಿದ ಹೊಂಡದಲ್ಲಿ ಸಿಲುಕಿದ ಕಾರು
ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬದಿ ಕುಡಿಯುವ ನೀರಿನ ಪೈಪು ಅಳವಡಿ ಸಲು ತೋಡಿದ ಹೊಂಡವನ್ನು ಸರಿಯಾಗಿ ಮುಚ್ಚದಿರುವುದು ವಾಹನಗಳು ಅಪಘಾತಕ್ಕೆ ಕಾರಣವಾಗುತ್ತಿರುವುದಾಗಿ ಆರೋಪ ಕೇಳಿಬಂದಿದೆ. ಈ ರೀತಿ ಕಳಪೆ ಕಾಮಗಾರಿ ನಡೆಸಿದ ಪರಿಣಾಮ ವಾಹನಗಳು ಹೊಂಡದಲ್ಲಿ ಸಿಲುಕಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನಿನ್ನೆ ರಾತ್ರಿ ಕಾರೊಂದು ಹೊಂಡದಲ್ಲಿ ಸಿಲುಕಿಕೊಂಡಿತ್ತು. ರಸ್ತೆ ಬದಿಗೆ ಕಾರನ್ನು ಚಲಾಯಿಸಿದಾಗ ಅದು ಹೊಂಡದಲ್ಲಿ ಹೂತುಹೋಗಿದೆ. ಅನಂತರ ಪಿಕಪ್ ವಾಹನದ ಸಹಾಯದಿಂದ ಕಾರನ್ನು ಮೇಲಕ್ಕೆತ್ತಲಾಯಿತು.
ಸರ್ವೀಸ್ ರಸ್ತೆ ಬದಿ ಕುಡಿಯುವ ನೀರು ಪೈಪ್ ಅಳವಡಿಸಲು ತೋಡಿದ ಹೊಂಡವನ್ನು ಸರಿಯಾಗಿ ಮಣ್ಣು ತುಂಬಿಸಿ ಮುಚ್ಚದೆ ಸಂಬಂಧಪಟ್ಟವರು ಮರಳುತ್ತಾರೆ. ಈ ಹೊಂಡದಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ಹೊಂಡ ಮುಚ್ಚುವ ಸಂದರ್ಭದಲ್ಲಿ ನಾಗರಿಕರು ಸೂಚನೆ ನೀಡಿದರೂ ಸಂಬಂಧಪಟ್ಟವರು ನಿರ್ಲಕ್ಷ್ಯವಹಿ ಸುತ್ತಿದ್ದಾರೆನ್ನಲಾಗಿದೆ. ಇದೀಗ ಬೇಸಿಗೆ ಮಳೆ ಸುರಿದು ರಸ್ತೆ ಬದಿ ನೀರು ತುಂಬಿಕೊಳ್ಳುತ್ತಿರುವುದು ಕೂಡಾ ವಾಹನಗಳ ಅಪಘಾತಗಳಿಗೆ ಕಾರಣವಾಗುತ್ತಿದೆ.