ಕಾಂಗ್ರೆಸ್ ಮುಖಂಡ ಜಿ. ರಾಮ ಭಟ್ ನಿಧನ
ಮಂಜೇಶ್ವರ: ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಮೀಯಪದವು ಬಳಿಯ ಗುಳಿಮನೆ ನಿವಾಸಿ ಜಿ. ರಾಮ ಭಟ್ (73) ನಿಧನರಾದರು. ಅಲ್ಪಕಾಲದ ಅಸೌಖ್ಯ ದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ನಿನ್ನೆ ನಿಧನ ಹೊಂದಿ ದ್ದಾರೆ. ಮೃತರು ಪತ್ನಿ ಗೋಪಿ, ಮಕ್ಕಳಾದ ಗೋವಿಂದ ಪ್ರಸಾದ್, ಚೇತನ, ಸೊಸೆ ವಾಣಿ, ಅಳಿಯ ವೆಂಕಟೇಶ್ ಕಿನ್ನಿಂಗಾರ್, ಸಹೋದರ – ಸಹೋದರಿಯರಾದ ಗಣಪತಿ ಭಟ್, ಕೃಷ್ಣ ಕುಮಾರ್ ಭಟ್, ನಾರಾಯಣ ಭಟ್, ಸುಬ್ರಹ್ಮಣ್ಯ ಭಟ್, ಉದಯಕುಮಾರ್ ಭಟ್, ಜಯಂತಿ, ಭವಾನಿ, ಮನೋರಮಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಸಂತಾಪ ವ್ಯಕ್ತಪಡಿಸಿದೆ.