ಕಾಠ್ಮಂಡುನಲ್ಲಿ ಭೂಕುಸಿತ; 2 ಬಸ್‌ಗಳು ನದಿಗೆ ಬಿದ್ದು  63 ಮಂದಿ ನಾಪತ್ತೆ 

ಕಾಠ್ಮಂಡು: ನೇಪಾಳದಲ್ಲಿ ಭೀಕರ ಮಳೆಗೆ  ಭೂಕುಸಿತವುಂಟಾಗಿ 63 ಜನರನ್ನು ಸಾಗಿಸುತ್ತಿದ್ದ  ಎರಡು ಬಸ್‌ಗಳು ಉಕ್ಕಿ ಹರಿಯುತ್ತಿರುವ ನದಿಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದವರೆಲ್ಲಾ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಇಂದು ಮುಂಜಾನೆ ನಡೆದಿದೆ. ನೇಪಾಳದ ಮದನ್ ಆಶ್ರಿತ್ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 63 ಜನರಿದ್ದ ಬಸ್ ಉಕ್ಕಿ ಹರಿಯುತ್ತಿರುವ ತೃಶೂಲಿ ನದಿಗೆ ಉರುಳಿ ಬಿದ್ದಿದೆ.  ಈ ಎರಡು ಬಸ್‌ಗಳು ಕಾಠ್ಮಂಡುವಿನಿಂದ ಹೊರಟಿತ್ತು. ಇಂದು ಮುಂಜಾನೆ 3.30ಕ್ಕೆ ಈ ದುರ್ಘಟನೆ ನಡೆದಿದೆ.  ನಾಪತ್ತೆಯಾದವರಿಗಾಗಿ ತೀವ್ರ ಶೋಧ ಆರಂಭಿಸಲಾಗಿದೆ. ಭೂಕುಸಿತದಿಂದ ಇದುವರೆಗೆ ನೇಪಾಳದಲ್ಲಿ ೩೪ ಮಂದಿ ಸಾವನ್ನಪ್ಪಿದ್ದಾರೆ. ಇದರ ಹೊರತಾಗಿ 28 ಮಂದಿ ಪ್ರವಾಹಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page