ಕಾರಡ್ಕ ಸೊಸೈಟಿ ವಂಚನೆ ಪ್ರಕರಣ: ಆರೋಪಿಗಳು ಅಡವಿರಿಸಿದ 48.5 ಲಕ್ಷ ರೂ.ಗಳ ಚಿನ್ನಾಭರಣ ಕ್ರೈಂಬ್ರಾಂಚ್ ವಶ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯ ಸೆಕ್ರೆಟರಿ, ಸಿಪಿಎಂ ಲೋಕಲ್ ಕಮಿಟಿ ಸದಸ್ಯನಾದ ರತೀಶನ್ ಲಪಟಾಯಿಸಿ ಕೇರಳ ಬ್ಯಾಂಕ್‌ನಲ್ಲಿ ಅಡವಿರಿಸಿದ 48.5 ಲಕ್ಷ ರೂಪಾಯಿಗಳ ಚಿನ್ನವನ್ನು ಕ್ರೈಂಬ್ರಾಂಚ್ ವಶಪಡಿಸಿಕೊಂಡಿದೆ.

ಈ ವಂಚನೆಗೆ ಸಂಬಂಧಿಸಿ ಸೆರೆಗೀಡಾದ ಮೂವರು ಆರೋಪಿಗಳನ್ನು  ಕರೆದೊಯ್ದು  ಕೇರಳ ಬ್ಯಾಂಕ್‌ನ ಕಾಞಂಗಾಡ್ ಶಾಖಯ ಲ್ಲಿ ನಡೆಸಿದ ಮಾಹಿತಿ ಸಂಗ್ರಹ ವೇಳೆ ಅಡವಿರಿಸಿದ ಚಿನ್ನವನ್ನು ವಶಪಡಿಸಲಾಗಿದೆ.

ಸೊಸೈಟಿಯಿಂದ ಹಣ ಲಪಟಾಯಿಸಲು ಒತ್ತಾಸೆಗೈದ ಆರೋಪದಂತೆ ಪೊಲೀಸರು ಸೆರೆಹಿಡಿದ ಪಳ್ಳಿಕೆರೆ ಪಂಚಾಯತ್ ಸದಸ್ಯ  ಬೇಕಲ ಹದ್ದಾದ್‌ನಗರದ ಕೆ. ಅಹಮ್ಮದ್ ಬಶೀರ್, ಪರಕ್ಲಾಯಿ ಏಳನೇ ಮೈಲಿನ ಎ.ಅಬ್ದುಲ್ ಗಫೂರ್,ಕಾಞಂಗಾಡ್ ನೆಲ್ಲಿಕ್ಕಾಡ್‌ನ ಎ.ಅನಿಲ್ ಕುಮಾರ್ ಎಂಬಿವರನ್ನು ನಿನ್ನೆ ನ್ಯಾಯಾಲಯ ಕ್ರೈಂಬ್ರಾಂಚ್‌ನ ಕಸ್ಟಡಿಗೆ ಬಿಟ್ಟುಕೊಟ್ಟಿದೆ. ಡಿವೈಎಸ್ಪಿ ಶಿಬು ಪಾಪಚ್ಚನ್‌ರ ನೇತೃತ್ವದಲ್ಲಿ ತನಿಖೆಗೊಳಪಡಿಸಿದ ಬಳಿಕ ಕೇರಳ ಬ್ಯಾಂಕ್  ಕಾಞಂಗಾಡ್ ಶಾಖೆಯಲ್ಲಿ ಮೊದಲು ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲಿ ಅನಿಲ್ ಕುಮಾರ್ ಹಾಗೂ ಅಬ್ದುಲ್ ಗಫೂರ್‌ನ ಹೆಸರಲ್ಲಿ ಚಿನ್ನಾಭರಣ ಅಡವಿರಿಸಲಾಗಿತ್ತು.

ಕೇರಳ ಬ್ಯಾಂಕ್‌ನ ಪೆರಿಯಾ ಶಾಖೆಯಲ್ಲಿ ಅಬ್ದುಲ್ ಗಫೂರ್‌ನ ಹೆಸರಲ್ಲಿ ಅಡವಿರಿಸಿದ  17 ಲಕ್ಷ ರೂಪಾಯಿಗಳ ಚಿನ್ನವನ್ನು ಇಂದು ಪತ್ತೆಹಚ್ಚಿ ವಶಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಕೆನರಾ ಬ್ಯಾಂಕ್‌ನ ಪಳ್ಳಿಕೆರೆ,   ಪೆರಿಯ ಶಾಖೆಗಳಲ್ಲಾಗಿ ಅಹಮ್ಮದ್ ಬಷೀರ್‌ನ ಹೆಸರಲ್ಲಿ 49 ಲಕ್ಷ ರೂಪಾಯಿಗಳ ಚಿನ್ನ ಅಡವಿರಿಸಲಾಗಿದಯೆಂದು ತನಿಖಾ ತಂಡ ಪತ್ತೆಹಚ್ಚಿದೆ. ಆ ಚಿನ್ನವನ್ನು ವಶಪಡಿಸಲಾಗುವುದ. ೮ ಲಕ್ಷಕ್ಕಿಂತಲೂ ಹೆಚ್ಚು ಮೊತ್ತದ ಚಿನ್ನವನ್ನು ಆರೋಪಿ ಅನಿಲ್ ಕುಮಾರ್‌ನ  ಸಂಬಂಧಿಕನ ಹೆಸರಲ್ಲೂ ಅಡವಿರಿಸಲಾಗಿದೆ. ಚಿನ್ನ ಅಡವಿರಿಸಿ ಲಭಿಸಿದ ಎಲ್ಲಾ ಮೊತ್ತವನ್ನು ರತೀಶನ್ ಪಡೆದುಕೊಂಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಸಹಕಾರಿ ಇಲಾಖೆ ಸೊಸೈಟಿ ಯಲ್ಲಿ ನಡೆಸಿದ  ತಪಾಸಣೆಯಲ್ಲಿ ವಂಚನೆ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ರಜೆಯಲ್ಲಿದ್ದ ರತೀಶನ್ ಈ ತಿಂಗಳ 9ರಂದು ಹಗಲು ಸೊಸೈಟಿಗೆ ತಲುಪಿ ಲಾಕರ್ ತೆರೆದು ಅಡವಿರಿಸಿದ ಚಿನ್ನಾಭರಣವನ್ನು ಅಪಹರಿಸಿದ್ದನೆಂದು ದೂರಲಾಗಿದೆ. ಆ ಚಿನ್ನವನ್ನು ಸೆರೆಗೀಡಾದ ಮೂವರು ಆರೋಪಿಗಳ ಹೆಸರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಅಡವಿರಿಸಿ ಹಣ ಪಡೆದುಕೊಂಡಿದ್ದು ಅನಂತರ ರತೀಶನ್ ತಲೆಮರೆಸಿಕೊಂ ಡಿರುವುದಾಗಿ ತಿಳಿದುಬಂದಿದೆ.

ಬ್ಯಾಂಕ್‌ನಲ್ಲಿ ಒಟ್ಟು 4.76 ಕೋಟಿ ರೂಪಾಯಿಗಳ ವಂಚನೆ ನಡೆದಿರುವುದಾಗಿ ದೂರಲಾಗಿದೆ. ವಂಚನೆ ಬಗ್ಗೆ ಜಿಲ್ಲಾ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ.  ತಲೆಮರೆಸಿಕೊಂಡ ಸೆಕ್ರೆಟರಿ ರತೀಶನ್ ಹಾಗೂ ವಂಚನೆಯ ಸೂತ್ರಧಾರ ಕಣ್ಣೂರು ನಿವಾಸಿ ಜಬ್ಬಾರ್ ಎಂಬಿವರು ಮೊದಲು ಬೆಂಗಳೂರಿ ನಲ್ಲಿರುವುದಾಗಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖಯನ್ನು ಅತ್ತ ವಿಸ್ತರಿಸಿದಾಗ ಅಲ್ಲಿಂದ ಪರಾರಿಯಾದ ಆರೋಪಿಗಳು ಹಾಸನ, ಶಿವಮೊಗ್ಗ, ಮೈಸೂರು ಎಂಬಿಡೆಗಳಿಗೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

 ಇದೇ ವೇಳೆ ತಲೆಮರೆಸಿಕೊಂಡ ಆರೋಪಿಗಳನ್ನು ಸೆರೆಹಿಡಿಯಲು ತನಿಖಾ ತಂಡಕ್ಕೆ ಸಾಧ್ಯವಾಗದಿರು ವುದು ಬ್ಯಾಂಕ್‌ನಲ್ಲಿ ಚಿನ್ನಾಭರಣ ಅಡವಿರಿಸಿದ ಗ್ರಾಹಕರಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ. ಆರೋ ಪಿಗಳು ತಲೆಮರೆಸಿಕೊಂಡಿರು ವುದಾಗಿ ಹೇಳಲಾಗುತ್ತಿದೆಯಾದರೂ ಅವರು ಆನ್‌ಲೈನ್‌ನಲ್ಲಿ ಸಕ್ರಿಯರಾಗಿ ದ್ದಾರೆಂದೂ ಹೇಳಲಾಗುತ್ತಿದೆ.  ವಾಟ್ಸಪ್ ಮೂಲಕ ಸಂಬಂಧಪಟ್ಟವರನ್ನು ಸಂಪರ್ಕಿಸುತ್ತಿದ್ದಾರೆ. ಹಾಗಿರುವಾಗ ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಅವರು ತಲೆಮರೆಸಿಕೊಂಡಿರುವ ಸ್ಥಳ ಗೊತ್ತುಪಡಿಸಿ ಬಂಧಿಸಲು ಸಾಧ್ಯವಾಗದಿರಲು ಕಾರಣವೇ ನೆಂದೂ ಜನರಾಡಿಕೊಳ್ಳುತ್ತಿದಾರೆ.

Leave a Reply

Your email address will not be published. Required fields are marked *

You cannot copy content of this page