ಕಾರಿನಲ್ಲಿ ಸಾಗಿಸುತ್ತಿದ್ದ ಪಾನ್ ಮಸಾಲೆ ವಶ: ಓರ್ವ ಸೆರೆ

ಉಪ್ಪಳ: ಕರ್ನಾಟಕ ಭಾಗದಿಂದ ಕಾಸರಗೋಡಿನತ್ತ ಕಾರಿನಲ್ಲಿ ಸಾಗಿಸುತ್ತಿದ್ದ 2250 ಪ್ಯಾಕೆಟ್ ಪಾನ್ ಮಸಾಲೆಯನ್ನು ಮಂಜೇಶ್ವರ ಪೊಲೀಸರು  ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಾಣಿಕೋತ್ತ್ ದಾರುಲ್ ಅಮಾನ್ ಅದಿಂಞಾಲ್‌ನ ಅಬ್ದುಲ್ಲ ಕುಂಞಿ (55) ಎಂಬಾತನನ್ನು ಬಂಧಿಸಲಾಗಿದೆ.ನಿನ್ನೆ ಸಂಜೆ ಮಂಜೇಶ್ವರ ಎಸ್‌ಐ ಉಮೇಶ್ ನೇತೃತ್ವದಲ್ಲಿ ಪೊಲೀಸರು ಕುಂಜತ್ತೂರು ಸರ್ವೀಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ತಲಪಾಡಿ ಭಾಗದಿಂದ ಕಾಸರಗೋ ಡಿನತ್ತ ತೆರಳುತ್ತಿದ್ದ ಕಾರಿನಲ್ಲಿ ಮೂರು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟ ಪಾನ್ ಮಸಾಲೆ ಪತ್ತೆಯಾಗಿದೆ.

RELATED NEWS

You cannot copy contents of this page