ಕುಂಬ್ಡಾಜೆ ಪಂ. ಬಿಎಂಎಸ್ ಧರಣಿ

ಮವ್ವಾರು: ಕೃಷಿ ಕಾರ್ಮಿಕರನ್ನು ಕೇರಳ ಸರಕಾರ ಅವಗಣಿಸುತ್ತಿದೆ ಎಂದು ಆರೋಪಿಸಿ ರಾಜ್ಯದಾದ್ಯಂತ ಪಂಚಾಯತ್ ಮುಂಭಾಗ ಬಿಎಂಎಸ್ ನಡೆಸುವ ಧರಣಿಯಂತೆ ಕುಂಬ್ಡಾಜೆ ಪಂ.ನಲ್ಲಿ ಧರಣಿ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಟಿ. ಕೃಷ್ಣನ್ ಪ್ರಧಾನ ಭಾಷಣ ಮಾಡಿದರು. ರಾಮಕೃಷ್ಣ ಪೊಡಿಪ್ಪಳ್ಳ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ವಲಯ ಅಧ್ಯಕ್ಷ ಆನಂದ ಸಿ.ಎಚ್., ಕಾರ್ಯದರ್ಶಿ ಸದಾಶಿವ, ನಾರಾಯಣ ಪದ್ಮಾರ್ ಶುಭ ಕೋರಿದರು. ದುರ್ಗಾ ಪ್ರಸಾದ್ ಸ್ವಾಗತಿಸಿ, ಶಿವಪ್ಪ ನಾಯ್ಕ್ ವಂದಿಸಿದರು.

You cannot copy contents of this page