ಕೂಡ್ಲುನಲ್ಲಿ ಮನೆಯಿಂದ ನಗ-ನಗದು ಕಳವು

ಕಾಸರಗೋಡು: ಕೂಡ್ಲು ಶಾಸ್ತಾನಗರದಲ್ಲಿ ಮನೆಯಿಂದ ಹಣ ಹಾಗೂ ಚಿನ್ನಾಭರಣ ಕಳವು ನಡೆದ ಬಗ್ಗೆ ದೂರಲಾಗಿದೆ.

ಶಾಸ್ತಾನಗರದ ಇಲ್ಯಾಸ್ ಮಂಜಿಲ್‌ನ ನಬೀಸ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಆದಿತ್ಯವಾರ ಸಂಜೆ 6 ಗಂಟೆಯಿಂದ ಸೋಮವಾರ ಸಂಜೆ 5.30೦ರ ಮಧ್ಯೆ ಕಳವು ನಡೆದಿದೆ. ಮನೆಯ ಅಡುಗೆ ಕೋಣೆ ಭಾಗದ ಬಾಗಿಲು ಮುರಿದು ಕಳ್ಳರು  ಒಳಗೆ ನುಗ್ಗಿದ್ದಾರೆ. ಬೆಡ್‌ರೂಂ ಕಪಾಟಿನ ಬೀಗ ಮುರಿದು ಒಂದು ಪವನ್ ಚಿನ್ನಾಭರಣ ಹಾಗೂ 22,000 ರೂಪಾಯಿ ಕಳವು ನಡೆಸಲಾಗಿದೆಯೆಂದು ದೂರಲಾಗಿದೆ.

Leave a Reply

Your email address will not be published. Required fields are marked *

You cannot copy content of this page