ಕೆಎಸ್ಇಬಿ ಕಚೇರಿಗೆ ನುಗ್ಗಿ ನಗ್ನತೆ ಪ್ರದರ್ಶನ: ಕರಾರು ನೌಕರನ ವಿರುದ್ಧ ಕೇಸು
ಕಾಸರಗೋಡು: ಕೆಎಸ್ಇಬಿ ಕಚೇರಿಗೆ ನುಗ್ಗಿ ನಗ್ನತೆ ಪ್ರದರ್ಶಿಸಿ ಅಶ್ಲೀಲ ಭಾಷೆಯಲ್ಲಿ ಬೈಗುಳದ ಸುರಿಮಳೆಗೈದಿರುವುದಾಗಿ ದೂರಲಾಗಿದೆ. ವರ್ಕಾಡಿ ಸೆಕ್ಷನ್ ಇಂಜಿನಿಯರ್, ಎಂ.ಪಿ. ಸಂದೀಪ್ರ ದೂರಿ ನಂತೆ ಕರಾರು ನೌಕರ ಜಯ ರಾಜ್ ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಸೋಮವಾರ ಸಂಜೆ ೬ ಗಂಟೆಗೆ ಪ್ರಕರಣಕ್ಕೆ ಆಸ್ಪದ ವಾದ ಘಟನೆ ಸಂಭವಿಸಿದೆ. ಮದ್ಯದಮಲಿನಲ್ಲಿ ಕಚೇರಿಗೆ ತಲುಪಿದ ಕರಾರು ನೌಕರ ಜಯರಾಜ್ ನನ್ನನ್ನು ಹಾಗೂ ಉಳಿದ ಸ್ಟಾಫ್ಗಳನ್ನು ಅಶ್ಲೀಲ ಭಾಷೆಯಲ್ಲಿ ಬೈದಿದ್ದು ಬಳಿಕ ನಗ್ನತೆ ಪ್ರದರ್ಶಿಸಿ ಹಲ್ಲೆಗೈಯ್ಯುವುದಾಗಿ ಬೆದರಿಕೆ ಒಡ್ಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.