ಕೆ.ಎಂ.ಸಿ.ಸಿಯಿಂದ ೧೦ ಲಕ್ಷ ರೂ. ಲೈಫ್ ಸುರಕ್ಷಾ ಚೆಕ್ ಹಸ್ತಾಂತರ

ವರ್ಕಾಡಿ: ಇಂಡಿಯನ್ ಯೂನಿ ಯನ್ ಮುಸ್ಲಿಂ ಲೀಗ್  ಇದರ ಪೋ ಷಕ ಸಂಘಟನೆಯಾದ ಕೆಎಂಸಿಸಿ ಇದರ ಘಟಕದ ವತಿಯಿಂದ ಲೈಫ್ ಸುರಕ್ಷಾ ಸ್ಕೀಂ ಸದಸ್ಯನಾಗಿದ್ದು ಇತ್ತೀಚೆಗೆ ನಿಧನಹೊಂದಿದ ಕೆದುಂಬಾಡಿ ಅಬ್ದುಲ್ ಖಾದರ್ ಇವರ ಕುಟುಂಬಕ್ಕೆ ೧೦ ಲಕ್ಷರೂಪಾಯಿಯ ಸಹಾಯ ಧನದ ಚೆಕ್ ಹಸ್ತಾಂತರ ನಡೆಯಿತು.

ಕೆದುಂಬಾಡಿ ಮುಸ್ಲಿಂ ಲೀಗ್ ಕಚೇರಿಯಲ್ಲಿ ಜರಗಿದ ಸಮಾರಂಭವನ್ನು ಮಂಡಲ ಅಧ್ಯಕ್ಷ ಅಜೀಜ್ ಹಾಜಿ ಮರಿಕೆ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಅಯ್ಯೂಬ್ ಉರುಮಿ ಅಧ್ಯಕ್ಷತೆ ವಹಿಸಿದರು. ಲೀಗ್ ವರ್ಕಾಡಿ ಪಂ. ಕಾರ್ಯದರ್ಶಿ ಅಬ್ದುಲ್ ಮಜೀದ್ ಬಿ.ಎ ಸ್ವಾಗತಿಸಿದರು. ಉಂರ ನಿರ್ವಹಣೆಗೆ  ಮಕ್ಕಾ ಯಾತ್ರೆ ಕೈಗೊಳ್ಳುವ ಟಿ.ಎಂ. ಅಬ್ದುಲ್ ಖಾದರ್‌ರಿಗೆ ಬೀಳ್ಕೊಡುಗೆ ನೀಡಲಾಯಿತು. ಎ.ಕೆ. ಆರಿಫ್ ಗೌರವಿಸಿದರು. ಸೈಫುಲ್ಲ ತಂಙಳ್, ಪಿ.ಬಿ. ಅಬೂಬಕ್ಕರ್ ಪಾತೂರು, ಕೆ. ಮೊಹ ಮ್ಮದ್, ಮೂಸ ಹಾಜಿ, ಅಶ್ರಫ್ ಪಾವೂರು, ಮನ್ಸೂರ್ ಆನೆಕಲ್, ಎ.ಕೆ. ಉಮ್ಮರಬ್ಬ, ಮೂಸ ಕೆದಂಬಾಡಿ, ಹಾರಿಸ್ ಪಾವೂರು, ಕೆ.ಎಫ್. ಇಕ್ಭಾಲ್, ಹನೀಫ್ ಸೀತಾಂಗೋಳಿ, ಝುಬೈರ್ ಪಾತೂರು, ನೌಶಾದ್ ಮಲಾರ್, ಮುತ್ತಲೀಬ್ ಕೆದುಂಬಾಡಿ ಶುಭಾಶಂಸ ನೆಗೈದರು. ರಝಾಕ್ ಕೆದುಂಬಾಡಿ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page