ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತದಿಂದ  ನೀರಿನ ದಾಳಿ: ತತ್ತರಿಸಿದ ಪಾಕ್

ನವದೆಹಲಿ: ಗಡಿಯಲ್ಲಿ ವಾಯುದಾಳಿ ನಡೆಸಿದ ಪಾಕಿಸ್ತಾನಕ್ಕೆ ಭಾರತ ಸರಿಯಾಗಿ ತಿರುಗೇಟು ನೀಡುತ್ತಿದೆ. ಪಾಕಿಸ್ತಾನ ನಡೆಸುತ್ತಿರುವ ಎಲ್ಲಾ ದಾಳಿಗಳನ್ನು ವಿಪಲಗೊಳಿಸುತ್ತಿರುವ ಭಾರತ ಇದೀಗ ಆದೇಶಕ್ಕೆ ಮತ್ತೊಂದು ತಿರುಗೇಟು ನೀಡಿದೆ. ರಿಯಾಸಿಯಲ್ಲಿರುವ ಚೈನಾಬ್ ನದಿಗೆ ನಿರ್ಮಿಸಿರುವ ಸಲಾಲ್ ಅಣೆಕಟ್ಟಿನ ಹಲವಾರು ಗೇಟುಗಳನ್ನು ತೆರೆದು ನೀರು ಬಿಡಲಾಗಿದೆ. ಆ ಮೂಲಕ ಭಾರತ ಪಾಕಿಸ್ತಾನಕ್ಕೆ ನೀರಿನ ದಾಳಿಯೂ ನಡೆಸಿದೆ. ಇದರಿಂದಾಗಿ ಪಾಕಿಸ್ತಾನದ ಹಲವು ಕಡೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಈ ಹಿಂದೆಯೂ ಭಾರತ ಸಿಂದೂ ನದಿಯ ನೀರನ್ನು ಏಕಾಏಕಿಯಾಗಿ ಹರಿಸಿದ್ದರಿಂದ ಪಾಕ್‌ನಲ್ಲಿ ಪ್ರವಾಹ ಭೀತಿ ಉಂಟಾಗಿತ್ತು. ಅದರ ಬೆನ್ನಲ್ಲೇ ಭಾರತ ಈ ಕ್ರಮ ಕೈಗೊಂಡಿದೆ.

ರಾತ್ರಿ ನಿದ್ದೆಯನ್ನೂ ಮಾಡದೆ ಸ್ಥಿತಿಗತಿಗಳ ಬಗ್ಗೆ ಸದಾ ಪರಿಶೀಲಿಸುತ್ತಿರುವ ಪ್ರಧಾನಿ ಮೋದಿ

ದೆಹಲಿ: ಭಾರತ ಮತ್ತು ಪಾಕಿ ಸ್ತಾನದ ನಡುವೆ ಯುದ್ಧ ಸದೃಶ್ಯವಾದ ರೀತಿಯ ಘಟನೆಗಳು ಇನ್ನೂ ಮುಂದುವರಿಯುತ್ತಿರುವಂತೆಯೇ ಆ ಎಲ್ಲಾ ಬೆಳವಣಿಗೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾತ್ರಿ ನಿದ್ದೆಯನ್ನೂ ಮಾಡದೆ ಸದಾ ನಿಗಾ ಇರಿಸಿ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಪಾಕ್ ವಿರುದ್ಧದ ಪ್ರತಿಕಾರ ಇನ್ನೂ ಮುಗಿ ದಿಲ್ಲ. ದೇಶವು ಸೂಕ್ಷ್ಮ ಪರಿಸ್ಥಿತಿ ಯಲ್ಲಿದೆ. ಈ ಸಮಯದಲ್ಲಿ ಜಾಗರೂಕತೆ ಪಾಲಿಸಬೇಕು, ಎಲ್ಲಾ ಇಲಾಖೆಗಳ ನಡುವೆ ಸಮನ್ವಯ ಮತ್ತು ಸಂವಹನ ಕರೆ ನೀಡಿರುವ ಪ್ರಧಾನಿ ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕರ ಸುರಕ್ಷಣೆಗೆ ಸರಕಾರ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page