ಗಾಂಜಾ ಸಹಿತ ಯುವಕ ಸೆರೆ

 ಕುಂಬಳೆ: 10 ಗ್ರಾಂ ಗಾಂಜಾ ಸಹಿತ ಯುವಕನನ್ನು ಬಂಧಿಸಲಾಗಿದೆ. ಕುಂಬಳೆ ಕೊಯಿಪ್ಪಾಡಿ  ಬದ್ರಿಯಾ ನಗರದ ನೀರೋಳಿ ವೀಟಿಲ್ ಅಪ್ಸಲ್ (28) ಎಂಬಾತನನ್ನು ಕುಂಬಳೆ ರೇಂಜ್ ಅಬಕಾರಿ ಇನ್‌ಸ್ಪೆಕ್ಟರ್ ಕೆ.ಡಿ. ಮಾಥ್ಯು ಹಾಗೂ ತಂಡ ಬಂಧಿಸಿದೆ. ಈತನ ವಿರುದ್ದ ಎನ್‌ಡಿಪಿಎಸ್ ಪ್ರಕಾರ ಕೇಸು ದಾಖಲಿಸಲಾಗಿದೆ. ಅಬಕಾರಿ ತಂಡದಲ್ಲಿ  ಪ್ರಿವೆಂಟೀವ್ ಆಫೀಸರ್‌ಗಳಾದ ಕೆ.ವಿ. ಮನಾಸ್, ಸಿಇಒಗಳಾದ ವಿ. ಜಿತೇಶ್, ಎಂ. ಧನೇಶ್, ಚಾಲಕ ಪ್ರವೀಣ್ ಕುಮಾರ್ ಎಂಬಿವರು.

Leave a Reply

Your email address will not be published. Required fields are marked *

You cannot copy content of this page