ಚುನಾವಣಾ ಪ್ರಚಾರದ ಬಳಿಕ ಪ್ರಧಾನಿ ಮೋದಿ ಧ್ಯಾನಕ್ಕಾಗಿ ಕನ್ಯಾಕುಮಾರಿಗೆ

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಪ್ರಚಾರದ ಬಳಿಕ ಪ್ರಧಾನಮಂತ್ರಿ ನರೇಂದ್ರಮೋದಿ ಕನ್ಯಾಕುಮಾರಿಯಲ್ಲಿ ಎರಡು ದಿನಗಳ ತನಕ ಧ್ಯಾನದಲ್ಲಿ ತೊಡಗಲಿದ್ದಾರೆಂಬ ಮಾಹಿತಿ ಲಭಿಸಿದೆ. ಲೋಕಸಭಾ ಚುನಾವಣಾ ಪ್ರಚಾರ ಮೇ 30ರಂದು ಕೊನೆಗೊಳ್ಳಲಿದೆ. ಆ ಬಳಿಕ ಪ್ರಧಾನಿ ತಿರುವ ನಂತಪುರಕ್ಕೆ ಆಗಮಿಸಿ ಅಲ್ಲಿಂದ  ಕನ್ಯಾಕುಮಾರಿಗೆ ತೆರಳಿ ಅಲ್ಲಿನ ಸ್ವಾಮಿ ವಿವೇಕಾನಂದ ಬಂಡೆ ಮೇಲೆ ಕುಳಿತು ಎರಡು ದಿನಗಳ ತನಕ ಧ್ಯಾನದಲ್ಲಿ ತೊಡಗಲಿದ್ದಾ ರೆಂಬ ಮಾಹಿತಿ ಲಭಿಸಿದೆ. 2019ರಲ್ಲಿ ಪ್ರಧಾನಮಂತ್ರಿ ಇದೇ ರೀತಿ ಕೇದಾರನಾಥ್ ಗುಹೆಯೊಳಗೆ ಧ್ಯಾನ ನಡೆಸಿದ್ದರು.

Leave a Reply

Your email address will not be published. Required fields are marked *

You cannot copy content of this page