ಟಿವಿ ಧಾರಾವಾಹಿ ನಟ ಕಾಞಂಗಾಡ್ ನಿವಾಸಿ ಕಿರಣ್‌ರಾಜೀವ್ ನಿಧನ

ಕಾಸರಗೋಡು: ಟೆಲಿ ಫಿಲ್ಮ್ ನಟ ಕಾಞಂಗಾಡ್ ವೆಳ್ಳಿಕೋತ್ ಪೆರ್ಲತ್ ನಿವಾಸಿ ಕಿರಣ್‌ರಾಜ್ (29) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಇಂದು ಮಧ್ಯಾಹ್ನ ವೇಳೆ ಮೃತದೇಹವನ್ನು ಊರಿಗೆ ತರಲಾಯಿತು. ಹಲವಾರು ಟಿವಿ ಧಾರಾವಾಹಿಗಳಲ್ಲಿ ಪ್ರಧಾನ ಕಥಾ ಪಾತ್ರದಲ್ಲಿ ಅಭಿನಯಿಸಿದ್ದರು. ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದರು. ಪೆರ್ಲತ್ ಕಿರಣ್ ನಿವಾಸ್‌ನ ಸಿ. ರಾಜೀವ್- ಕನಕ ರಾಜೀವ್ ದಂಪತಿ ಪುತ್ರನಾಗಿದ್ದಾರೆ. ಕೀರ್ತನ ಸಹೋದರಿಯಾಗಿದ್ದಾಳೆ.

Leave a Reply

Your email address will not be published. Required fields are marked *

You cannot copy content of this page