ದಾರಿ ಮಧ್ಯೆ ಯುವತಿಯನ್ನು ಬಿಗಿದಪ್ಪಿದ ಬೈಕ್ ಸವಾರ: ಆರೋಪಿಗಾಗಿ ಶೋಧ

ಕಾಸರಗೋಡು: ಆಡನ್ನು ಮೇಯಿಸಿ ಮನೆಗೆ ಮರಳುತ್ತಿದ್ದ ಯುವತಿಯನ್ನು ದಾರಿಮಧ್ಯೆ ಯುವಕನೋರ್ವ ಬಿಗಿದಪ್ಪಿಕೊಂಡ ಬಗ್ಗೆ ದೂರಲಾಗಿದೆ. ಈ ಬಗ್ಗೆ ೪೦ರ ಹರೆಯದ ಯುವತಿ ನೀಡಿದ ದೂರಿನಂತೆ ವೆಳ್ಳೇರಿಕುಂಡ್ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ಮಾಲೋತ್ ಸಮೀಪ ಘಟನೆ ನಡೆದಿದೆ. ಬೈಕ್‌ನಲ್ಲಿ ತಲುಪಿದ ಯುವಕ ಯುವತಿಯ ಸಮೀಪ ನಿಲ್ಲಿಸಿ ದಾರಿ ಕೇಳಿದ್ದನೆನ್ನಲಾಗಿದೆ. ಅನಂತರ ಸ್ವಲ್ಪ ಮುಂದಕ್ಕೆ ಸಂಚರಿಸಿ ಮರಳಿ ಬಂದು ಯುವತಿಯನ್ನು ಬಿಗಿದಪ್ಪಿ ಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಇದೇ ಹೊತ್ತಿನಲ್ಲಿ ಆಟೋರಿಕ್ಷಾ ವೊಂದು ಬರುತ್ತಿರುವುದನ್ನು ಕಂಡ ಯುವಕ ಬೈಕ್‌ನಲ್ಲಿ ಪರಾರಿಯಾಗಿ ದ್ದಾನೆಂದು ತಿಳಿಸಲಾಗಿದೆ.

RELATED NEWS

You cannot copy contents of this page