ದಿಲ್ಲಿಯಲ್ಲಿ ಬಂದಿಳಿದ ವಿಶ್ವಕಪ್ ವಿಜೇತ ಟೀಂ ಇಂಡಿಯಾ

ನವದೆಹಲಿ: ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಗೆದ್ದು ಗೋಲ್ಡನ್ ಟ್ರೋಫಿ ಸಹಿತ ಟೀಂ ಇಂಡಿಯಾ  ಬಾರ್ಬಡೋಸ್‌ನಿಂದ ಇಂದು ಬೆಳಿಗ್ಗೆ  ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅಭಿಮಾನಿಗಳಿಂದ ಭಾರೀ ಸಂಭ್ರಮ ಕಂಡು ಬಂದಿದೆ.

ಭಾರತೀಯ ಆಟಗಾರರು ಇದಕ್ಕೂ ಮೊದಲೇ ತವರಿಗೆ ಮರಳಬೇಕಾಗಿತ್ತು. ಆದರೆ  ಬಾರ್ಬಡೋಸ್‌ನಲ್ಲಿ ಚಂಡಮಾರುತದಿಂದಾಗಿ ಅವರ ಆಗಮನ ವಿಳಂಬವಾಯಿತು.

ದಿಲ್ಲಿಯಲ್ಲಿ ಬಂದಿಳಿದ ಟೀಂ ಇಂಡಿಯಾ ಬಳಿಕ ಅಲ್ಲಿ ವಿಶ್ರಾಂತಿ ಪಡೆದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪ್ರಧಾನಿ ಜತೆ ಉಪಹಾರ  ಸೇವಿಸಿದರು. ಟೀಂ ಇಂಡಿಯಾ ದಿಲ್ಲಿಯಿಂದ ಇಂದು ಸಂಜೆ 4 ಗಂಟೆಗೆ ಮುಂಬೈಗೆ ಆಗಮಿಸಲಿದೆ. ಸಂಜೆ ೫ ಗಂಟೆಗೆ ಮುಂಬೈ ನಗರದ ತೆರೆದ ಬಸ್ ಮೆರವಣಿಗೆಯಲ್ಲಿ ಅವರು ಭಾಗವಹಿಸಲಿದ್ದಾರೆ. ನಂತರ ಸಂಜೆ 7 ಗಂಟೆಗೆ ಮುಂಬೈ ವಾಂಖೆಡೆಯಲ್ಲಿ ಬೃಹತ್ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತಂಡಕ್ಕೆ 125 ಕೋಟಿ ರೂಪಾಯಿಗಳ ಬಹುಮಾನ ವಿತರಿಣೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page