ಧರ್ಮದಲ್ಲಿ ರಾಜಕೀಯ ಮಾಡಿದರೆ ಸಹಿಸುವುದಿಲ್ಲ-ಬಿಜೆಪಿ
ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದಂ ಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಮಹಾಬಲೇಶ್ವರ ಭಟ್ ಅವರು ದೇಶದ ಪ್ರಧಾನಮಂತ್ರಿ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಸವಾಲು ಹಾಕಿರುವುದು ಅತ್ಯಂತ ದೌರ್ಭಾಗಕರವೆಂದು ಬಿಜೆಪಿ ಕಾಸರಗೋಡು ಮಂಡಲ ಸಮಿತಿ ತಿಳಿಸಿದೆ. ಮಹಾಬಲೇಶ್ವರ ಭಟ್ಅವರಿಗೆ ರಾಜಕೀಯ ಮಾಡುವ ಬಯಕೆಯಿದ್ದರೆ ಧರ್ಮದ ವೇದಿಕೆ ಬಿಟ್ಟು ನೇರ ರಾಜಕೀಯದ ವೇದಿಕೆಗೆ ಬಂದಲ್ಲಿ ಕಾಸರಗೋಡಿನ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಸಿದ್ಧವಿದೆ. ಕೇಂದ್ರ ಸರಕಾರದ ಧಾರ್ಮಿಕ ಟೂರಿಸಂ ಅಡಿಯಲ್ಲಿ ಮಧೂರು ಕ್ಷೇತ್ರಕ್ಕೆ ಮಂಜೂರುಗೊ ಳಿಸಿದ ಅನುದಾನ ಇನ್ನೂ ಕೂಡಾ ಯಾಕೆ ಸಿಗಲಿಲ್ಲವೆಂಬುಗನ್ನು ಮಧೂರು ಕ್ಷೇತ್ರದ ಆಡಳಿತಾಧಿಕಾರಿಗಳಲ್ಲಿ ಅಥವಾ ಕಾಸರಗೋಡನ್ನು ಪ್ರತಿನಿಧೀಕರಿಸುವ ಜನಪ್ರತಿನಿಧಿಗಳಲ್ಲಿ ಕೇಳಬೇಕು. ಅಲ್ಲದೆ ದೇಶದ ಪ್ರಧಾನಮಂತ್ರಿ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಸವಾಲು ಹಾಕಿದರೆ ಬಿಜೆಪಿ ಸಹಿಸುವುದಿಲ್ಲ. ಪ್ರಧಾನಿ ನರೇಂದ್ರಮೋದಿ ಅವರು ಕಾಸರಗೋಡು ಜನತೆಗೆ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಕಾಸರಗೋಡು ಬಂದರು ನವೀಕರಣಕ್ಕೆ 100 ಕೋಟಿರೂ.ಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಮುದ್ರಾ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಮೊದಲಾದ ಯೋಜನೆಗಳಿಂದ ಕಾಸರಗೋಡಿನ ಅನೇಕರ ಬಡವರ ಬಾಳಿನಲ್ಲಿ ಬೆಳಕು ತಂದಿದ್ದಾರೆ. ಕಾಸರಗೋಡಿನ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸಲು ಕೋಟ್ಯಂತರ ರೂ.ಗಳ ಅನುದಾನ ನೀಡಿದ್ದಾರೆ. ನಗರಸಭೆ, ಪಂಚಾಯತ್ಗಳಿಗೆ ಹೆಚ್ಚಿನ ಮೊತ್ತದ ಸಿಎಫ್ಸಿ ಕೊಡುವುದರ ಮುಖಾಂತರ ಊರಿನ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸಿದ್ದಾರೆ. ದೇಶದ ತೀರ್ಥ ಕ್ಷೇತ್ರಗಳಾದ ಕಾಶಿ, ಅಯೋಧ್ಯೆ, ಅನಂತಪದ್ಮನಾಭ ಕ್ಷೇತ್ರ, ಶಬರಿಮಲೆ, ಗುರುವಾಯೂರು ಮೊದಲಾದ ತೀರ್ಥ ಕ್ಷೇತ್ರಗಳನ್ನು ಅಭಿವೃದ್ಧಿಪಡಿ ಸಲು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಮೋದಿ ಏನು ಮಾಡಿದ್ದಾರೆಂದು ಜನರಿಗೆ ಗೊತ್ತಿದೆ. ಆದ್ದರಿಂದ ಧರ್ಮದಲ್ಲಿ ರಾಜಕೀಯ ಬೆರೆಸುವುದನ್ನು ಬಿಜೆಪಿ ಸಹಿಸುವುದಿಲ್ಲ. ಮಹಾಬಲೇಶ್ವರ ಭಟ್ ಕಾಸರಗೋಡಿನ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.