ನಾಪತ್ತೆಯಾದ ವ್ಯಕ್ತಿ ಕಾಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ನಾಪತ್ತೆಯಾಗಿದ್ದ ವ್ಯಕ್ತಿ ಕಾಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವರ್ಕಾಡಿ ಕೆಳಗಿನ ಉಜಾರು ನಿವಾಸಿ ಥೋಮಸ್ ಡಿ’ಸೋಜಾ (72) ಎಂಬವರು ಮೃತಪಟ್ಟ ವ್ಯಕ್ತಿ. ಇವರ ಮೃತದೇಹ ಮನೆಯಿಂದ ಅರ್ಧ ಕಿಲೋ ಮೀಟರ್ ದೂರದ ಕಾಡಿನಲ್ಲಿ ಪತ್ತೆಯಾಗಿದೆ. ಸಮೀಪದಲ್ಲೇ ವಿಷ ಹಾಗೂ ಮದ್ಯದ ಬಾಟ್ಲಿಗಳು ಕಂಡುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.  ಮೇ ೧೩ರಂದು ಥೋಮಸ್ ಡಿ’ಸೋಜಾ ನಾಪತ್ತೆ ಯಾಗಿದ್ದರು. ಅಂದು ಸಂಜೆ ಮನೆಯಿಂದ ಹೊರಗೆ ತೆರಳಿದ ಅವರು ಮರಳಿ ಬಂದಿರಲಿಲ್ಲ. ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ನಿನ್ನೆ ಮಧ್ಯಾಹ ವೇಳೆ ಮೃತದೇಹ ಪತ್ತೆಯಾಗಿದೆ. ವರ್ಷಗಳ ಹಿಂದೆ ಮಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಥೋಮಸ್ ಡಿ’ಸೋಜಾ ಬಳಿಕ ಊರಿನಲ್ಲಿ  ಕೃಷಿ ನಡೆಸುತ್ತಿದ್ದರು.

ಮೃತರು ಸಹೋದರ-ಸಹೋ ದರಿ ಜೋಕಿ ಡಿ’ಸೋಜಾ, ಜೆರಿ ಡಿ’ಸೋಜಾ, ಫ್ರಾನ್ಸಿಸ್ ಡಿ’ಸೋಜಾ, ಲಾರೆನ್ಸ್ ಡಿ’ಸೋಜಾ, ದುರ್ಶಿನ್ ಡಿ’ಸೋಜಾ, ಮಗ್ಗಿ ಡಿ’ಸೋಜಾ, ರೀತಾ ಡಿ’ಸೋಜಾ, ಜೋನ್ ಡಿ’ಸೋಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page