ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶಿಖರ ಪ್ರತಿಷ್ಠೆ

ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ ಪೂರ್ವಭಾವಿಯಾಗಿ ನಿನ್ನೆ ಬೆಳಗ್ಗೆ ಶ್ರೀ ಉಮಾಮಹೇಶ್ವರ ಮತ್ತು ಸಪರಿವಾರ ದೇವರ ಪ್ರತಿಷ್ಠೆ ಜರಗಿತು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ತಾಂತ್ರಿಕ ವಿದಿs ವಿಧಾನಗಳೊಂದಿಗೆ ಜೀವಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾಬಲಿ, ಅಂಕುರಪೂಜೆ ನಡೆಯಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದರು. ರಾತ್ರಿ ನಿತ್ಯನೈಮಿತ್ಯಾದಿಗಳ ನಿರ್ಣಯ, ಅಂಕುರಪೂಜೆ, ಮಂಟಪ ಸಂಸ್ಕಾರ, ಸೋಪಾನ ಪೂಜೆ ನಡೆಯಿತು. ಭಜನಮಂಟಪದಲ್ಲಿ ಶ್ರೀ ಗೋಪಾಲಕೃಷ್ಣ ಭಜನ ಸಂಘ ನೆಕ್ರಾಜೆ, ಶ್ರೀ ಲಕ್ಷಿö್ಮÃಪಾರ್ವತಿ ಭಜನ ಸಂಘ ಬೆಳ್ಳೂರು, ಶ್ರೀ ಅನಂತಪದ್ಮನಾಭ ಮಹಿಳಾ ಭಜನಮಂಡಳಿ ಅನಂತಪುರ, ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಅಡೂರು, ಶ್ರೀ ವಿಶ್ವಬ್ರಹ್ಮ ಭಜನ ವೃಂದ ಕಾಸರಗೋಡು ಭಜನ ಸೇವೆ ನಡೆಸಿಕೊಟ್ಟರು. ಉಮಾಮಹೇಶ್ವರ ಸಾಂಸ್ಕೃತಿಕ ವೇದಿಕೆಯಲ್ಲಿ ವರ್ಷಿಣಿ ಆರ್ ಪುಣಿಂಚಿತ್ತಾಯ ಪುಂಡೂರು, ಆರ್ಯಾಂಬಾ ಮಾತೃಮಂಡಳಿ ನಾರಂಪಾಡಿ ಇವರಿಂದ ತಿರುವಾದಿರ, ವಿದುಷಿ ವಾಣೀಪ್ರಸಾದ್ ಕಬೆಕೋಡು ಸುನಾದ ಸಂಗೀತ ಕಲಾಶಾಲೆ ಬದಿಯಡ್ಕ ಇವರಿಂದ ಶಾಸ್ತಿçÃಯ ಸಂಗೀತ, ಸಂಜೆ ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅವರ ಕೀರ್ತನಾ ಕುಟೀರದ ವಿದ್ಯಾರ್ಥಿಗಳಿಂದ ಹರಿಕಥಾ ಸತ್ಸಂಗ ನಡೆಯಿತು.
ಇಂದು ಪ್ರಾತಃಕಾಲ ಗಣಪತಿ ಹೋಮ, ಇಂದ್ರಾದಿ ದಿಕ್ಪಾಲಕ ಪ್ರತಿಷ್ಠೆ, ಸಪ್ತ ಮಾತೃಕಾ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಿತು. ವಿವಿಧ ಭಜನ ಸಂಘಗಳಿAದ ಭಜನೆ, ಕುಣಿತ ಭಜನೆ ನಡೆಯಲಿದೆ. ಸಾಂಸ್ಕೃತಿಕ ವೇದಿಕೆಯಲ್ಲಿ ಹಿಂದುಸ್ತಾನೀ ಶಾಸ್ತಿçÃಯ ಸಂಗೀತ ಹಾಗೂ ಭಜನ್, ಯಕ್ಷಗಾನ ವೈಭವ, ಭಕ್ತಗಾನಾಮೃತ, ನೃತ್ಯ ಗಾಯನ, ಭರತನಾಟ್ಯ, ಫ್ಯೂಶನ್ ಡ್ಯಾನ್ಸ್, ಭರತನಾಟ್ಯ ಮತ್ತು ನೃತ್ಯ ವೈವಿಧ್ಯ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page