ನಿವೃತ್ತರಾದ 13ನೇ ದಿನ ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ದಿನೇಶ್ ವಿ. ನಿಧನ
ಮಂಜೇಶ್ವರ: ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರಾಗಿ ಕೆಲವೇ ದಿನಗÀಳ ಹಿಂದೆ ನಿವೃತ್ತಿ ಹೊಂದಿದ ಹೊಸಂಗಡಿ ಬಳಿಯ ವಾಮಂಜೂರು, ಅಂಗಡಿಪದವು ನಿವಾಸಿ ದಿನೇಶ್ ವಿ. (56) ನಿಧನ ಹೊಂದಿದರು. ಜ್ವರ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಿನ್ನೆ ಅಪರಾಹ್ನ 3 ಗಂಟೆಗೆ ನಿಧನ ಸಂಭವಿಸಿದೆ. ಮೃತರು ದಿ| ಕುಂಞÂ ರಾಮನ್ – ಅಮ್ಮಣಿ ದಂಪತಿ ಪುತ್ರನಾ ಗಿದ್ದು, ಪತ್ನಿ ಶ್ರೀಲೇಖ.ಕೆ, ಮಕ್ಕಳಾದ ಶ್ರೀಷ್ಮ, ದೇವಪ್ರಿಯ, ಅಭಿರಾಮ್, ಸಹೋದರಿಯರಾದ ಅಹಲ್ಯ, ಶೀಲಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಿನೇಶ್.ವಿ ಯವರು 16 ವರ್ಷಗಳ ಕಾಲ ಕುಂಜ ತ್ತೂರು ಸರಕಾರಿ ಹೈಸ್ಕೂಲ್ ನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಬಂಗ್ರ ಮಂಜೇಶ್ವರ ಸರಕಾರಿ ಶಾಲೆ, ಎಡನೀರು ಸರಕಾರಿ ಹೈಸ್ಕೂಲ್ನಲ್ಲಿ ಮುಖ್ಯೊಪಾಧ್ಯಾಯ ರಾಗಿ, ಬಳಿಕ ಆರು ವರ್ಷಗಳ ಕಾಲ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ, ಎರಡು ವರ್ಷಗಳ ಕಾಲ ಜಿಲ್ಲಾ ವಿದ್ಯಾಧಿಕಾರಿಯಾಗಿ, ಕೊನೆಗೆ ಜಿಲ್ಲಾ (ಡೆಪುಟಿ ಡೈರೆಕ್ಟರ್) ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಮೇ 31 ರಂದು ನಿವೃತ್ತಿ ಹೊಂದಿದ್ದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಳೆದ ಎರಡು ದಿನಗಳ ಹಿಂದೆ ಜ್ವರ ತಗಲಿ ಕುಂಬಳೆಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಜ್ವರ ಉಲ್ಬಣಗೊಂಡ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತÄ.
ಮೃತದೇಹವನ್ನು ಇಂದು ಬೆಳಿಗ್ಗೆ ಹೊಸಂಗಡಿ ಬಳಿಯ ವಾಮಂಜೂರು ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಮನೆಗೆ ಸಾಗಿಸಿ, ನಂತರ ಹೊಸಂಗಡಿ ಬಳಿಯ ರಾಮತ್ತಮಜಾಲ್ ಸಾರ್ವಜನಿಕ ರುಧ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ನಿಧನಕ್ಕೆ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ, ಶಾಶಕರಾದ ಸಿ.ಎಚ್. ಕುಞಂಬು, ಎ.ಕೆ.ಎಂ ಅಶ್ರಫ್, ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶ್ಯಾಮ್ ಭಟ್ ಪೈವಳಿಕೆ, ಅರವಿಂದಾಕ್ಷ ಭಂಡಾರಿ ದಡ್ಡಂಗಡಿ, ಸುಖೇಶ್, ರವೀಂದ್ರ ಎನ್, ರಾಮಕೃಷ್ಣ ಕಡಂಬಾರ್, ಮಧು ಮಾಸ್ತರ್, ವಿಜಯ ಸಿ.ಎಚ್, ಸಿರಾಜುದ್ದೀನ್, ಇಸ್ಮಾಯಿಲ್, ಶಿವರಾಮ ಭಟ್ ಸಂತಾಪ ವ್ಯಕ್ತಪಡಿಸಿದ್ದಾರೆ.