ನೈಋತ್ಯ ಮುಂಗಾರು ಮಳೆ ಆರಂಭ
ನವದೆಹಲಿ: ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಪ್ರದೇಶಗಳು, ದಕ್ಷಿಣ ಮತ್ತು ಉತ್ತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮುಂಗಾರು ಮಳೆ ಈಗಾಗಲೇ ಪ್ರವೇಶಿಸಿದೆ.
ಸಾಧಾರಣವಾಗಿ ಈ ಪ್ರದೇಶ ಗಳಲ್ಲಿ ಮೇ 21ರಂದು ಮುಂಗಾರು ಮಳೆ ಪ್ರವೇಶಿಸುತ್ತದೆ. ಆದರೆ ಈ ವರ್ಷ ಅದು ಮೇ 13ರಂದೇ ಪ್ರವೇಶಿಸಿದೆ. ಇದರಿಂದಾಗಿ ಕೇರಳದಲ್ಲಿ ಮೇ 27ರಂದು ಅಥವಾ ಅದರ ಒಂದೆರಡು ದಿನಗಳ ಮುಂಚಿ ತವಾಗಿ ಅಥವಾ ನಂತರ ಮಳೆಗಾಲ ಆರಂಭಗೊಳ್ಳಲಿದೆ ಯೆಂದು ಕೇಂದ್ರ ಹವಾಮಾನ ಇಲಾಖೆ ಔಪಚಾರಿಕ ವಾಗಿ ಘೋಷಿಸಿದೆ. ಈ ವರ್ಷ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚಿರಲಿದೆಯೆಂದು ಊಹಿಸಲಾ ಗಿದೆ. ಮುಂಗಾರು ಮಳ ಬೇಗ ಪ್ರವೇಶಿಸುವುದು 16 ವರ್ಷಗಳ ಬಳಿಕ ಇದೇ ಮೊದಲ ಬಾರಿಯಾಗಿ ದೆಯೆಂದು ಇಲಾಖೆ ಹೇಳಿದೆ.