ಪಾಕಿಸ್ತಾನ ಪರ ಬೇಹುಗಾರಿಕೆ : ಭಾರತೀಯ ನೌಕಾಪಡೆ ಸಿಬ್ಬಂದಿ ಬಂಧನ

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ವರ್ಷಗಳ ಕಾಲ ಮತ್ತು ಆಪರೇಷನ್ ಸಿಂಧೂರ ಸಮಯದಲ್ಲೂ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಂತೆ ಭಾರತೀಯ ನೌಕಾಪಡೆಯ ಪ್ರಧಾನ ಕಚೇರಿಯ ಉದ್ಯೋಗಿ ವಿಶಾಲ್ ಯಾದವ್ ಎಂಬಾತನನ್ನು ರಾಜಸ್ತಾನ ಪೊಲೀಸ್ ಗುಪ್ತಚರ ವಿಭಾಗ ಬಂಧಿಸಿದೆ. ಈತ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿ ಕ್ಲರ್ಕ್ ಆಗಿ ದುಡಿಯುತ್ತಿದ್ದು, ಹರ್ಯಾಣ ನಿವಾರಿಯಾಗಿದ್ದಾನೆ. ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಹಲವು ಪುರಾವೆಗಳನ್ನೂ ಪೊಲೀಸರು ಈತನಿಂದ ಪತ್ತೆಹಚ್ಚಿದ್ದರು.

Leave a Reply

Your email address will not be published. Required fields are marked *

You cannot copy content of this page