ಪಾಲಕ್ಕಾಡ್‌ನಲ್ಲಿ ಬಿಜೆಪಿಗೆ ಸೋಲು: ರಾಜೀನಾಮೆಗೆ ಮುಂದಾದ ಕೆ. ಸುರೇಂದ್ರನ್

ತಿರುವನಂತಪುರ: ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಯಲ್ಲಿ  ಉಂಟಾದ ಸೋಲಿನ ಹಿನ್ನೆಲೆಯಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ರಾಜೀನಾಮೆಗೆ ಮುಂದಾಗಿದ್ದಾರೆ. ಈ ವಿಷಯವನ್ನು ಅವರು ಪಕ್ಷದ ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದಾರೆ.  ಪಾಲ ಕ್ಕಾಡ್ ಸೋಲಿನ ನೈತಿಕ ಹೊಣೆಗಾರಿ ಕೆಯನ್ನು ವಹಿಸಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ. ಆದರೆ ರಾಜೀ ನಾಮೆ ನೀಡಬೇಕಾದ ಅಗತ್ಯವಿಲ್ಲ ವೆಂದು ಕೇಂದ್ರ ನಾಯಕತ್ವ ತಿಳಿಸಿರುವು ದಾಗಿ  ಸುರೇಂದ್ರನ್‌ರನ್ನು ಬೆಂಬಲಿಸು ವ ನೇತಾರರು ತಿಳಿಸಿದ್ದಾರೆ.  ಪಾಲಕ್ಕಾಡ್ ಸೋಲಿನ ಕುರಿತು ಚರ್ಚೆ ನಡೆಸಲು ಬಿಜೆಪಿ ರಾಜ್ಯ ನಾಯಕತ್ವ ಸಭೆ ನಾಳೆ ಕೊಚ್ಚಿಯಲ್ಲಿ ನಡೆಯಲಿರುವಂತೆಯೇ ಕೆ. ಸುರೇಂ ದ್ರನ್ ತಾನು ರಾಜೀನಾಮೆಗೆ ಸಿದ್ಧ ನೆಂದು  ಹೇಳಿದ್ದಾರೆ. ಈ ಕುರಿತಾಗಿ ಹೆಚ್ಚಿನ ಮಾಹಿತಿಗಳನ್ನು ಇಂದು ಮ ಧ್ಯಾಹ್ನ ಪತ್ರಿಕಾಗೋಷ್ಠಿ ಯಲ್ಲಿ ಅವರು ತಿಳಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page